ಪುತ್ತೂರು: ಶ್ರವಣರಂಗ ಪ್ರತಿಷ್ಠಾನ ಸವಣೂರು ಇದರ ಆಶ್ರಯದಲ್ಲಿ ಪಾರ್ಥ ಸಾರಥಿ ಎಂಬ ಯಕ್ಷಗಾನ ತಾಳಮದ್ದಳೆಯು ನಾರಾಯಣ ಬಸ್ತಿ ಇವರ ಲಕ್ಷ್ಮೀ ನಿವಾಸದಲ್ಲಿ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮದ ಪ್ರಯುಕ್ತ ಫೆ. 19 ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಬಟ್ಯಮೂಲೆ, ಆನಂದ ಸವಣೂರು, ನೇಸರ ಸವಣೂರು, ಶ್ರೇಯಾ ಸವಣೂರು, ಮಾನ್ವಿ ಜಿ ಎಸ್,ಶ್ರಾವ್ಯ ಪೆರುವಾಜೆ,ಚೆಂಡೆ ಮದ್ದಳೆ ಯಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಭಕ್ತಕೋಡಿ,ಮುಮ್ಮೇಳದಲ್ಲಿ ಚಂದ್ರಶೇಖರ್ ಆಲಂಕಾರು (ಶ್ರೀ ಕೃಷ್ಣ) ಶ್ರೀ ಗುಡ್ಡಪ್ಪ ಬಲ್ಯ(ಕೌರವ) ತಾರಾನಾಥ ಸವಣೂರು ( ಅರ್ಜುನ) ಅಚ್ಯುತ ಭಕ್ತಕೋಡಿ (ಬಲರಾಮ) ನಾಗಿ ಭಾಗವಹಿಸಿದರು ದಿವಾಕರ ಬಸ್ತಿ ಮನೆಯವರು ಅತಿಥಿಗಳನ್ನು ಗೌರವಿಸಿದರು