ಪುತ್ತೂರು: ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ ಫೆ. 21ರಂದು ನಡೆಯಿತು.
“ಸುದರ್ಶನ ವಿಜಯ “ತಾಳಮದ್ದಳೆಯು ಶೇಖರ್ ಬಿರ್ವ ರವರ ಪ್ರಾಯೋಜಕತ್ವದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಚಂದ್ರಶೇಖರ ಹೆಗ್ಡೆ ನೆಲ್ಯಾಡಿ, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಮಹಾವಿಷ್ಣು ( ಪೂಕಳ ಲಕ್ಷ್ಮೀನಾರಾಯಣ ಭಟ್ಟ), ಸುದರ್ಶನ ( ಕು೦ಬ್ಳೆ ಶ್ರೀಧರ್ ರಾವ್ ), ಲಕ್ಷ್ಮೀ( ಭಾಸ್ಕರ್ ಬಾರ್ಯ ), ಶತ್ರುಪ್ರಸೂಧನ ( ಗುಡ್ಡಪ್ಪ ಬಲ್ಯ), ದೇವೇಂದ್ರ ( ದುಗ್ಗಪ್ಪ ಯನ್ ) ಸಹಕರಿಸಿದರು. ವಿಶ್ವನಾಥ ಗೌಡ, ಚಂದ್ರಶೇಖರ ಬನ್ನೂರು ಮೋಹನ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು. ಟಿ.ರಂಗನಾಥ ರಾವ್ ಸ್ವಾಗತಿಸಿ ಚಂದ್ರಶೇಖರ ಬಡೆಕ್ಕಿಲ ವಂದಿಸಿದರು.