ಪುತ್ತೂರು: ಮಲಿನ ನೀರು, ಹೂಳು ತುಂಬಿ ದುರ್ನಾತ ಬೀರುತ್ತಿದ್ದ ಪರ್ಲಡ್ಕದ ಡಾ. ಶಿವರಾಮ ಕಾರಂತರ ಬಾಲವನ ಮುಂಭಾಗದ ಚರಂಡಿಯನ್ನು ಗುರುವಾರ ಶುಚಿಗೊಳಿಸಲಾಯಿತು.
ಬಾಲವನ ಪ್ರವೇಶಿಸುವಾಗಲೇ ಪ್ರವಾಸಿಗರನ್ನು, ಸ್ಥಳೀಯರನ್ನು ಕೆಟ್ಟ ವಾಸನೆಯೊಂದಿಗೆ ಸ್ವಾಗತಿಸುತ್ತಿದ್ದ ಚರಂಡಿಯ ಮಲಿನದ ಬಗ್ಗೆ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರ ಗಮನ ಸೆಳೆಯುವ ಕೆಲಸವನ್ನು ಸುದ್ದಿ ಮಾಡಿತ್ತು. ತಕ್ಷಣ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು ನಗರಸಭೆಗೆ ಸೂಚನೆ ನೀಡಿ, ಕ್ರಮ ಜರುಗಿಸಿದ್ದಾರೆ. ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಪೌರಾಯುಕ್ತರು ಶುಚಿ ಕೆಲಸವನ್ನು ನಿರ್ವಹಿಸಿದರು.