ಪುತ್ತೂರು: ಎಪ್ರಿಲ್ 2 ಮತ್ತು 3ರಂದು ನಡೆಯಲಿರುವ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳದ ಪೂರ್ವಭಾವಿ ಸಭೆ ಕೂಟೇಲು ನದಿ ಕಿನಾರೆಯಲ್ಲಿರುವ ಶ್ರೀಕ್ಷೇತ್ರದ ಧರ್ಮಸ್ಥಳದ ಜಾಗದಲ್ಲಿ ಫೆ.27ರಂದು ನಡೆಯಿತು.
ಕಂಬಳ ಸಮಿತಿಯ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಭೆ ನಡೆಯಿತು. ಕಂಬಳದ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಮಿತಿಯ ಪದಾಧಿಕಾರಿಗಳಾದ ಎನ್.ಉಮೇಶ್ ಶೆಣೈ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೇಶವ ಭಂಡಾರಿ ಕೈಪ, ವಿಶ್ವನಾಥ ಶೆಟ್ಟಿ ಕಂಗ್ವೆ, ಅಶೋಕ್ ರೈ ನೆಕ್ಕರೆ, ಸದಾಶಿವ ಸಾಮಾನಿ ಸಂಪಿಗೆದಡಿ, ಜಯಪ್ರಕಾಶ್ ಬದಿನಾರು, ಚಂದ್ರಶೇಖರ ಮಡಿವಾಳ, ಏಕ ವಿದ್ಯಾಧರ್, ಕೃಷ್ಣಪ್ರಸಾದ್ ಪೆರಿಯಡ್ಕ, ಯೋಗೀಶ್ ಸಾಮಾನಿ ಸಂಪಿಗೆದಡಿ, ಕರುಣಾಕರ ಸಾಮಾನಿ ಸಂಪಿಗೆದಡಿ, ಪ್ರಜ್ವಲ್ ರೈ ಪಾತಾಜೆ, ರಾಕೇಶ್ ಶೆಟ್ಟಿ ಕೆಮ್ಮಾರ, ಜಗದೀಶ್ ಪರಕಜೆ, ರಾಘವೇಂದ್ರ ನಾಯಕ್ ನಟ್ಟಿಬೈಲು, ಸತೀಶ್ ಮಡಿವಾಳ ಸೇಡಿಯಾಪು ಮತ್ತಿತರರು ಭಾಗವಹಿಸಿದ್ದರು.