ಕೆಯ್ಯೂರು : ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ,ಪಂಜಿಗುಡ್ಡೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ 10ಲಕ್ಷ ಅನುದಾನ ಒದಗಿಸಿದ್ದು ಅದರ ಗುದ್ದಲಿ ಪೂಜೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ತೆಂಗನಕಾಯಿ ಒಡಯುವ ಮೂಲಕ ಗುದ್ದಲಿ ಪೂಜೆ ನೇರವೇರಿಸಿದರು. ಸಂದರ್ಭದಲ್ಲಿ ಕೆಯ್ಯೂರು ಗ್ರಾ.ಪಂ. ಅದ್ಯಕ್ಷೆ ಜಯಂತಿ ಎಸ್ ಭಂಡಾರಿ, ಉಪಾದ್ಯಕ್ಷೆ ಗಿರಿಜಾ ಕಣಿಯಾರು ಸದಸ್ಯರಾದ ಶರತ್ ಕುಮಾರ್ ಮಾಡಾವು, ಸುಮಿತ್ರಾ ದಿವಾಕರ ಪಲ್ಲತ್ತಡ್ಕ, ಕೆಯ್ಯೂರು ಶಕ್ತಿ ಕೇಂದ್ರ ಪ್ರಮುಖ್ ಪ್ರಕಾಶ ಆಳ್ವ ಇಳಾಂತಜೆ, ಕೆಯ್ಯೂರು 4ನೇ ವಾರ್ಡ್ ಅಧ್ಯಕ್ಷ ಲತೇಶ್ ಗೌಡ ಕಣಿಯಾರು, ಪಂಜಿಗುಡ್ಡೆ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ಅದ್ಯಕ್ಷ ಕಿಟ್ಟ ಅಜಿಲ ಕಣಿಯಾರು, ದಿವಾಕರ ಪೂಜಾರಿ ಪಲ್ಲತ್ತಡ್ಕ, ಕೃಷ್ಣ ಪ್ರಸಾದ್ ಪಲ್ಲತ್ತಡ್ಕ,ಜಿನ್ನಪ್ಪ ಪೂಜಾರಿ ಪಲ್ಲತ್ತಡ್ಕ, ಶರತ್ ರೈ ದೇರ್ಲ, ರಾಮಚಂದ್ರ ಕಾಪುತ್ತಡ್ಕ, ಪ್ರೀತಮ್ ಪಲ್ಲತ್ತಡ್ಕ, ಗ್ರಾಮಸ್ಥರು ಉಪಸ್ಥಿತಿಯಿದ್ದರು.