ಕ್ಯಾನ್ಸರ್ ರೋಗಿಗೆ ಕೇಶ ದಾನ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಮಾದರಿ ಯುವಕ ಕಡಬದ ಜನಾರ್ದನ

0

ಕಡಬ: ಕೇಶವು ಮನುಷ್ಯನ ಸೌಂದರ್ಯದ ಒಂದು ಭಾಗವಾಗಿದೆ, ಅದನ್ನು ನಾನಾ ರೂಪಗಳಿಂದ ಅಲಂಕಾರ ಮಾಡಿಕೊಳ್ಳಲಾಗುತ್ತದೆ, ಆದರೆ ತಲೆ ಕೂದಲು ಇಲ್ಲದಿದ್ದರೆ ಮನುಷ್ಯನಲ್ಲಿ ಜಿಗುಪ್ಸೆಗೂ ಕಾರಣವಾಗುತ್ತದೆ! ಆದುದರಿಂದ ಕೇಶದ ಮಹತ್ವ ಅದನ್ನು ಕಳೆದುಕೊಂಡಾಗ ಅನುಭವವಾಗುತ್ತದೆ, ಅಂಗಾಂಗ ದಾನದಂತೆ ಇಂದು ಕೇಶದಾನವೂ ಮಹತ್ವವನ್ನು ಪಡೆದಿದೆ. ಇಂತಹ ಸನ್ನಿವೇಶದಲ್ಲಿ ಇಲ್ಲೊಬ್ಬ ಯುವಕ ಕೇಶದಾನ ಮಾಡಿಕೊಂಡು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮಾದರಿಯಾಗಿದ್ದಾರೆ.

 

ಕಡಬ ತಾಲೂಕಿನ ಉಳಿಪು ಕಂಪತಡ್ಡ ಜಿನ್ನಪ್ಪ ಗೌಡ ಹಾಗೂ ಶೀಲಾವತಿ ದಂಪತಿ ಪುತ್ರ, ಪ್ರಸ್ತುತ ಮಂಗಳೂರಿನಲ್ಲಿರುವ ಸೋನಿ ಕಂಪೆನಿಯ ಸರ್ವೀಸ್ ಸೆಂಟರ್ ನಲ್ಲಿ ಉದ್ಯೋಗಿಯಾಗಿರುವ ಜನಾರ್ದನ ಅವರು ವಿಶೇಷ ರೀತಿಯಲ್ಲಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಅವರು ಕಳೆದ ಮೂರು ವರ್ಷಗಳಿಂದ ಬೆಳೆಯಲು ಬಿಟ್ಟಿದ್ದ ತನ್ನ ಕೇಶರಾಶಿಯನ್ನು ಇನ್ನೊಬ್ಬರ ಬಾಳಿನ ನೆಮ್ಮದಿಗಾಗಿ ದಾನ ಮಾಡಿದ್ದಾರೆ.

ಇವರು ಪ್ರತಿ ವರ್ಷ ತನ್ನ ಹುಟ್ಟು ಹಬ್ಬದಲ್ಲಿ ರಕ್ತದಾನ ಮಾಡುತ್ತಾ ಬಂದಿದ್ದರು ಈ ವರ್ಷ ತಾನೂ ವಿಶೇಷ ರೀತಿಯಲ್ಲಿ ತನ್ನ ಕೇಶದಾನ ಮಾಡುವುದರೊಂದಿಗೆ ಬಾಲ ಸಂಸ್ಕರಣಾ ಕೇಂದ್ರ ಮಂಗಳೂರು ಇಲ್ಲಿನ ಪುಟ್ಟ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೊಂಡು ತಾನೂ ಅವರ ಸಂತಸದೊಂದಿಗೆ ತನ್ನ ಹುಟ್ಟು ಹಬ್ಬವನ್ನು ಸಂಭ್ರಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here