ಪಡುಮಲೆ ಕುತ್ಯಾಳ ಶ್ರೀ ಮಹಾವಿಷ್ಣು ದೇವಸ್ಥಾನದ ದರ್ಶನ ಬಲಿ ಬಟ್ಟಲು ಕಾಣಿಕೆ

0

ಬಡಗನ್ನೂರುಃ ಪಡುಮಲೆ ಕುತ್ಯಾಳ   ಶ್ರೀ ಮಹಾವಿಷ್ಣು ದೇವಸ್ಥಾನದ   ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಮಾ.4 ರಂದು ದರ್ಶನ ಬಲಿ,ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ  ಬಳಿಕ  ಶ್ರೀ ದೇವರಿಗೆ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ವೇಧ ಮೂರ್ತಿ  ಬ್ರಹ್ಮಶ್ರೀ   ಕುಂಟಾರು ವಾಸುದೇವ ತಂತ್ತಿಯವರ ಮಾರ್ಗದರ್ಶನದಲ್ಲಿ  ವೇಧ ಮೂರ್ತಿ ಬ್ರಹ್ಮಶ್ರೀ  ಕುಂಟಾರು  ರವೀಶ ತಂತ್ರಿಯವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. 
ಮಾ.೩ ರಂದು ಗಣಪತಿ ಹೋಮ, ನವಕಾಭಿಷೇಕ,ತುಲಾಭಾರ ಸೇವೆ, ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಬಳಿಕ ಶ್ರೀ ದೇವರ ಬಲಿ ಹೊರಟು  ನೃತ್ಯ ಬಲಿ ಶ್ರೀ ಭೂತ ಬಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೂಕ್ತೇಸರ ವಿನೋದ್ ಆಳ್ವ ಮೂಡಾಯೂರು, ಉತ್ಸವ ಸಮಿತಿ ಅಧ್ಯಕ್ಷ ಅನಗ್ ಅಳ್ವ, ಕಾರ್ಯದರ್ಶಿ ಅಯಾಗ್ ಅಳ್ವ  ಕಾರ್ಯನಿರ್ವಾಹಕ ವಿಶ್ವನಾಥ ರೈ ಕುತ್ಯಾಳ, ಅರ್ಚಕ ವಿಶ್ವನಾಥ ಭಟ್,   ಪಡುಮಲೆ ಶ್ರೀ ಕೋಟಿ ಚೆನ್ನಯ ಸಂಚಾಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಸಮಿತಿ ಸದಸ್ಯರಾದ ವಿಜಯಕುಮಾರ್ ಸೊರಕೆ, ನಾರಾಯಣ ಪುಜಾರಿ ಸರೋಳಿ ಮೂಲೆ, ಗುರುಪ್ರಸಾದ ರೈ ಕುದ್ಕಾಡಿ, ಹಾಗೂ ಊರ ಭಕ್ತಾಧಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here