![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ರಸ್ತೆ ಬದಿ ಮತ್ತು ರೈಲ್ವೇ ಹಳಿ ನಡುವಿನ ಹೊಂಡಕ್ಕೆ ಕಾರೊಂದು ನಿಯಂತ್ರಣ ತಪ್ಪಿ ಬಿದ್ದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ನೆಹರುನಗರ ಸಮೀಪ ಮಾ.7ರಂದು ನಡೆದ ಬಗ್ಗೆ ವರದಿಯಾಗಿದೆ.
ಮಂಗಳೂರು ಕಡೆಯಿಂದ ಬರುತ್ತಿದ್ದ ಮಾರುತಿ ಝೆನ್ ಕಾರು ನಿಯಂತ್ರಣ ತಪ್ಪಿ ನೆಹರು ನಗರ ಸಮೀಪ ರೈಲ್ವೇ ಹಳಿ ಮತ್ತು ರಸ್ತೆ ಬದಿಯ ನಡುವಿನ ಹೊಂಡಕ್ಕೆ ಬಿದ್ದಿದೆ. ಘಟನೆಯಿಂದಾಗಿ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಕದಲ್ಲೇ ರೈಲ್ವೇ ಹಳಿ ಇದ್ದರಿಂದ ಕೂದಲೆಲೆ ಅಂತರದಲ್ಲಿ ಅಪಾಯ ತಪ್ಪಿದೆ.