ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ನರಸಿಂಹ ಪ್ರತಿಷ್ಠಾವರ್ಧಂತಿ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ನರಸಿಂಹ ಪ್ರತಿಷ್ಟಾವರ್ಧಂತಿ ವಿಜೃಂಭಣೆಯಿಂದ ಆಚರಿಸಲಾಯಿತು. ಮುಂಜಾನೆ ಹೋಮ ಹವನದೊಂದಿಗೆ ಶ್ರೀ ದೇವರಿಗೆ ಸೀಯಾಳಭಿಷೇಕದೊಂದಿಗೆ ಮಹಾಪೂಜೆ ನಡೆಯಿತು. ರಾತ್ರಿ ಶ್ರೀ ದೇವರನ್ನು ಬೆಳ್ಳಿಯ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಥಬೀದಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಭಕ್ತರು ಶ್ರೀ ದೇವರಿಗೆ ಆರತಿ ಬೆಳಗಿ ಪುನೀತರಾದರು.

 

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರಾದ ಬಿ. ಗಣೇಶ ಶೆಣೈ ಮೊಕ್ತೇಸರಾದ ಡಾ. ಎಂ.ಆರ್ ಶೆಣೈ, ಕೆ. ಅನಂತರಾಯ ಕಿಣಿ, ಯು. ನಾಗರಾಜ ಭಟ್, ಕೆ. ದೇವಿದಾಸ ಭಟ್, ಜಿಎಸ್‌ಬಿ ಸಮಾಜ ಬಾಂಧವರಾದ ಎಂ.ಮಂಜುಳೇಶ್ ಭಟ್, ಮಂಜುನಾಥ ನಾಯಕ್, ಸತ್ಯ ಪ್ರಸಾದ್, ವೆಂಕಟೇಶ ಶೆಣೈ, ಹರೀಶ ಕಿಣಿ ಉಪಸ್ಥಿತರಿದ್ದರು. ಪುರೋಹಿತರಾದ ಸುಬ್ರಹ್ಮಣ್ಯ ಭಟ್, ರವೀಂದ್ರ ಭಟ್, ಸಂದೀಪ ಭಟ್, ಲಕ್ಷ್ಮೀನಾರಯಣ ಭಟ್ ಅವರು ಪೂಜಾ ವಿಧಿ- ವಿಧಾನಗಳನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here