ನಿಡ್ಪಳ್ಳಿ; ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬೆಂಗಳೂರಿನ ಪಂಚಾಯತ್ ರಾಜ್ ಆಯುಕ್ತಾಲಯ ದಲ್ಲಿ ಆಯೋಜಿಸಿದ್ದ “ನವ ಭಾರತ ನಾರಿ” ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿಯ ವೈಯಕ್ತಿಕ ಮಹಿಳಾ ಫಲಾನುಭವಿ ಅನಿತಾ ಕೂವೆಂಜ ಹಾಗೂ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪದ್ಮಾವತಿ ಪೆರಾಜೆ ಇವರನ್ನು ಮಾ.11 ರಂದು ಗೌರವಿಸಲಾಯಿತು. ದ.ಕ.ಜಿಲ್ಲೆಯ ಪರವಾಗಿ ಪುತ್ತೂರು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶೈಲಜಾ ಭಟ್ ಭಾಗವಹಿಸಿದ್ದರು.