ನೂಜಿಬಾಳ್ತಿಲ: ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರರ ವಾರ್ಷಿಕ ಜಾತ್ರಾ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ದೈವಸ್ಥಾನದಲ್ಲಿ ನಡೆಯಿತು.
ಪೂರ್ವಭಾವಿ ಸಭೆಯಲ್ಲಿ ಜಾತ್ರಾ ಪ್ರಯುಕ್ತ ನಡೆಯಬೇಕಾದ ಕೆಲಸ ಕಾರ್ಯ, ಪೂರ್ವ ಸಿದ್ಧತೆಗಳ ತಯಾರಿ ಬಗ್ಗೆ ಕಾರ್ಯದರ್ಶಿ ಉಮೇಶ್ ಶೆಟ್ಟಿ ಸಾಯಿರಾಮ್ ಮಾಹಿತಿ ನೀಡಿದರು. ಗೋಕುಲದಾಸ್ ಶೆಟ್ಟಿಗಾರ್ ಉಡುಪಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಅರ್ಚಕ ಕೃಷ್ಣ ಹೆಬ್ಬಾರ್ ಪೂಜೆ ನೆರವೇರಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಉತ್ಸವ ಸಮಿತಿ ಅಧ್ಯಕ್ಷ ದುಗ್ಗಣ್ಣ ಗೌಡ ಹೊಸಮನೆ, ಪರಿಚಾರಕರಾದ ವಿಜಯ ಕುಮಾರ್ ಕೇಪುಂಜ, ಯಶೋಧರ ಗೌಡ ಮಾರಪ್ಪೆ, ಸೀತಾರಾಮ ತಲೆಕ್ಕಿ, ದೈವನರ್ತಕರಾದ ಸೋಮಶೇಖರ ಕಲ್ಲುಗುಡ್ಡೆ, ಧರ್ಣಪ್ಪ ಕಲ್ಲುಗುಡ್ಡೆ, ಪ್ರಮುಖರಾದ ರಾಮಚಂದ್ರ ಗೌಡ ಎಳುವಾಳೆ, ನೇಮಣ್ಣ ಗೌಡ ಕಲ್ಮಾರು, ಸೋಮಶೇಖರ ನಡುಗುಡ್ಡೆ, ಸೇರಿದಂತೆ ಪರಿಚಾರಕರು, ಆಡಳಿತ ಸಮಿತಿ, ಉತ್ಸವ ಸಮಿತಿ ಸದಸ್ಯರು, ಪದಾಧಿಕಾರಿಗಳು, ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪದ್ಮನಾಭ ಗೌಡ ಕೇಪುಂಜ ಸ್ವಾಗತಿಸಿ, ವಂದಿಸಿದರು.