ಶಿವ ಸುವರ್ಣ ಮಾಲಾ ಸ್ತುತಿ ಭಕ್ತಿಗೀತೆ ಬಿಡುಗಡೆ

0

ಪುತ್ತೂರು : ಶಿವ ಸುವರ್ಣ ಮಾಲಾ ಸ್ತುತಿ ಭಕ್ತಿಗೀತೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾ.13 ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆ ಮಾಡಿದರು. ಟೀಮ್ ಗಾನಯಾನದ ಗಾಯಕಿಯರಾದ ಸ್ವರ ತ್ರಿವೇಣಿಗಳಾದ ಶ್ರೇಷ್ಠ ಆಳ್ವ ಪುತ್ತೂರು, ಪ್ರಸೀದಾ ಪಿ.ರಾವ್ ಧರ್ಮಸ್ಥಳ, ದಿಯಾ ರಾವ್ ಮಂಗಳೂರು ಇವರ ಕಂಠದಿಂದ ಮೂಡಿ ಬಂದಿದೆ.

 


ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ, ಸಂಸ್ಕೃತ ಸಿರಿಯ ಕಿಶೋರ್ ಬೆಳ್ತಂಗಡಿ, ಹರೀಶ್ ಆಳ್ವ ಪುತ್ತೂರು, ಉಷಾ ಆಳ್ವ ಪುತ್ತೂರು, ಸಿಂಧೂ ರಾವ್ ಮಂಗಳೂರು, ದಿವ್ಯಪ್ರಸನ್ನ ರಾವ್ ಧರ್ಮಸ್ಥಳ ಹಾಗೂ ಪವನ್ ಧರ್ಮಸ್ಥಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here