ಪುತ್ತೂರು: ಸುಮಾರು 300ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕೆಯ್ಯೂರು ಗ್ರಾಮದ ತೆಗ್ಗು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.29 ರಂದು ಜರಗಲಿದ್ದು ಮಾ.22 ರಂದು ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಮೂಲತಃ ಕೋಡಂಬು ಕುಟುಂಬಸ್ಥರಾದ ಪಕೀರ ಇವರಿಂದ ಆರಂಭಗೊಂಡ ಶ್ರೀ ವಿಷ್ಣುಮೂರ್ತಿ ದೈವದ ಆರಾಧನೆಯು ಮುಂದೆ ಪೊಡಿಯ, ಕುಂಞ ರವರುಗಳಿಂದ ನಡೆದುಕೊಂಡು ಬಂತು. ಊರ ಪರವೂರ ದಾನಿಗಳ ಸಹಕಾರದೊಂದಿಗೆ ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ ತೆಗ್ಗು ಒತ್ತೆಕೋಲವು ವಿಶೇಷವಾದ ಕಾರಣಿಕತೆಯನ್ನು ಹೊಂದಿದೆ. ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಮುಖ್ಯ ಪಾತ್ರಿ ಬಾಬು ತೆಗ್ಗುರವರು ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಾಬು ಮಾಸ್ತರ್ ತೆಗ್ಗು, ಕಾರ್ಯದರ್ಶಿ ರಮೇಶ್ ತೆಗ್ಗು, ರಾಜೇಶ್, ಹರೀಶ್, ರವಿ, ಹರೀಶ್ ಟಿ, ಕಿಶೋರ್, ಹೊನ್ನಪ್ಪ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.