ಪುತ್ತೂರು:ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನ ಪುತ್ತೂರು, ಸುಳ್ಯ, ಹಾಸನ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ಏ. 4 ರಿಂದ ‘ವರುಷದ ಹರುಷ’ ವಾರ್ಷಿಕೋತ್ಸವದ ಸಂಭ್ರಮವು ಪ್ರಾರಂಭಗೊಂಡಿದೆ.
ಗ್ರಾಹಕ ಸೇವೆಯಲ್ಲಿ ಜಿ. ಎಲ್. ಆಚಾರ್ಯ ಪುತ್ತೂರು ಮಳಿಗೆ 65ವರ್ಷ, ಹಾಸನ ಮಳಿಗೆ ೧೫ ವರ್ಷ, ಸುಳ್ಯ ಮಳಿಗೆ ೧೦ ವರ್ಷ ಹಾಗೂ ಕುಶಾಲನಗರ ಮಳಿಗೆ ೫ ವರ್ಷ ಪೂರೈಸಿದ ಸಂಭ್ರಮವನ್ನು ಒಟ್ಟಾಗಿ ಆಚರಿಸುವ ಸಂತಸದ ಶಾಪಿಂಗ್ ಹಬ್ಬವಾಗಿದೆ ಈ ‘ವರುಷದ ಹರುಷ’. ಪ್ರಾಚಿ ಬ್ರ್ಯಾಂಡ್ನ ಅತ್ಯಾಕರ್ಷಕ ಶೈಲಿಯ ಆಂಟಿಕ್ ಮದುವೆ ಚಿನ್ನಾಭರಣಗಳ ವಿಶೇಷ ಸಂಗ್ರಹವಿದೆ. ಗ್ರಾಹಕರ ಅನುಕೂಲಕ್ಕಾಗಿ ಪುತ್ತೂರು ಹಾಗೂ ಹಾಸನ ಮಳಿಗೆಗಳು ಭಾನುವಾರಗಳಂದು ತೆರೆದಿರುತ್ತದೆ. ನ್ಯಾಯೋಚಿತ ಬೆಲೆ, ಪಾರದರ್ಶಕ ವ್ಯವಹಾರ ಜಿ. ಎಲ್.ನ ವೈಶಿಷ್ಟ್ಯತೆ. ಜಿ. ಎಲ್. ಆಚಾರ್ಯ ಪುತ್ತೂರು ಮಳಿಗೆಯು ಸುಮಾರು ೬,೦೦೦ ಚದರ ಅಡಿ ವಿಸ್ತಿರ್ಣದಲ್ಲಿ ಕಾರ್ಯಾಚರಿಸುತ್ತಿದೆ. ಇತ್ತೀಚೆಗೆ ಕರ್ನಾಟಕ ರಾಜ್ಯ ಜ್ಯುವೆಲ್ಲರ್ ಫೆಡರೇಶನ್ (ಕೆಜೆಎಫ್) ಸಂಸ್ಥೆಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿದೆ.
ವರುಷದ ಹರುಷದ ಕೊಡುಗೆಯಾಗಿ ಗ್ರಾಹಕರಿಗೆ ಚಿನ್ನಾಭರಣಗಳ ಖರೀದಿಗೆ ಪ್ರತಿ ಗ್ರಾಂಗೆ ರೂ. ೧೨೫ರವರೆಗೆ ರಿಯಾಯಿತಿ, ಬೆಳ್ಳಿಯ ಎಂಆರ್ಪಿ ಆಭರಣಗಳ ಮೇಲೆ ೫% ರಿಯಾಯಿತಿ, ಬೆಳ್ಳಿಯ ಸಾಮಾಗ್ರಿಗಳ ಮೇಲೆ ಕಿಲೋ ಗ್ರಾಂಗೆ ರೂ. ೨,೦೦೦ ರಿಯಾಯಿತಿ, ಅಂತಿಮವಾಗಿ ನಡೆಯುವ ಲಕ್ಕಿ ಡ್ರಾ ದಲ್ಲಿ ೧೦ ಸ್ಮಾರ್ಟ್ ಫೋನ್ಗಳು ಹಾಗೂ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಗೆಲ್ಲುವ ಅವಕಾಶವಿದೆ.