ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟದ ನೂತನ ಅಧ್ಯಕ್ಷರಾಗಿ ಸುಂದರ ಬಲ್ಯಾಯ, ಕಾರ್ಯದರ್ಶಿಯಾಗಿ ಸುಪ್ರೀತಾ ಬಾಲಯ ಹಾಗೂ ಕೋಶಾಧಿಕಾರಿಯಾಗಿ ಮಾಧವ ಕಲ್ಪನೆ ಆಯ್ಕೆಯಾಗಿದ್ದಾರೆ. ಉಪ ಕಾರ್ಯದರ್ಶಿಯಾಗಿ ವಿದ್ಯಾ, ಉಪಾಧ್ಯಕ್ಷರಾಗಿ ಹೇಮರಾಜ್ ರೆಂಜಲಾಡಿ, ಶಾಲಿನಿ ಸೊರಕೆ, ಸವಿತಾ ನೆಕ್ಕಿಲು ಆಯ್ಕೆಯಾದರು.
ಎ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಮೇಲ್ವಿಚಾರಕರಾದ ಶೃತಿ, ಸೇವಾ ಪ್ರತಿನಿಧಿ ಚಿತ್ರ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.