ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಳದ ಆಡಳಿತ ಮೊಕ್ತೇಸರರಾಗಿ ಬಿ. ಗಣೇಶ್ ಶೆಣೈ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರರಾಗಿ ಬಿ. ಗಣೇಶ್ ಶೆಣೈ ಅವರು ಮುಂದಿನ ಐದು ವರ್ಷದ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಮೊಕ್ತೇಸರುಗಳಾಗಿ ಡಾ. ಎಂ. ರತ್ನಾಕರ್ ಶೆಣೈ, ಕೆ. ಅನಂತರಾಯ ಕಿಣಿ, ಯು. ನಾಗರಾಜ ಭಟ್ ಮತ್ತು ಪಿ. ದೇವಿದಾಸ್ ಭಟ್‌ರವರು ಅವಿರೋಧವಾಗಿ ಆಯ್ಕೆಯಾದರು.

ಇತ್ತೀಚೆಗೆ ದೇವಸ್ಥಾನದಲ್ಲಿ ನಡೆದ ಜಿಎಸ್‌ಬಿ ಸಮಾಜ ಬಾಂಧವರ ಮಹಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಾಜದ ಎಚ್. ವಾಸುದೇವ ಪ್ರಭು, ಕೆ. ಗಣೇಶ್ ನಾಯಕ್, ಪಿ. ಹರೀಶ್ ಪೈ, ಎನ್. ಉಮೇಶ್, ಯು. ಪ್ರದೀಪ್ ನಾಯಕ್, ಪಿ. ವಿನಾಯಕ ಪೈ, ಪಿ. ಪ್ರಸಾದ ಶೆಣೈ ಮತ್ತಿತ್ತರರು ಸಭೆಯಲ್ಲಿ ಉಪಸ್ಥಿತರಿದ್ದರು. ವೀಕ್ಷಕರಾಗಿ ಮಂಗಳೂರಿನ ನ್ಯಾಯವಾದಿ ಎಂ. ಪ್ರೇಮಾನಂದ ಕಿಣಿ ಮತ್ತು ದೇವಳದ ಲೆಕ್ಕ ಪರಿಶೋಧಕರಾದ ಪಿ. ನರೇಂದ್ರ ಪೈಯವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here