ಸತ್ಯಸಾಯಿ ಸೇವಾ ಮಂದಿರದಲ್ಲಿ 48ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರ

0

ಪುತ್ತೂರು: ಸತ್ಯಸಾಯಿ ಸೇವಾ ಸಮಿತಿ, ಬೈಂದೂರು ಪ್ರಭಾಕರ ಮೆಮೋರಿಯಲ್ ಟ್ರಸ್ಟ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ದ.ಕ.ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್‌ಲಾಕ್ ಸಂಚಾರಿ ನೇತ್ರ ಚಿಕತ್ಸಾ ಘಟಕ ಮಂಗಳೂರು, ಕೆ.ಎಂ.ಸಿ ಮಂಗಳೂರು ಮತ್ತು ಸರಕಾರಿ ಆಸ್ಪತ್ರೆ ಪುತ್ತೂರು ಇವರ ಸಹಯೋಗದಲ್ಲಿ ಎ.12ರಂದು ಇಲ್ಲಿನ ಶ್ರೀ ಸತ್ಯಸಾಯಿ ಮಂದಿರದ ವಠಾರದಲ್ಲಿ 48ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯಿತು.


ಸತ್ಯ ಸಾಯಿ ಸೇವಾ ಸಮಿತಿ ರಾಜ್ಯಾಧ್ಯಕ್ಷ ಎಂ.ಪದ್ಮನಾಭ ಪೈ ಅವರು ಶಿಬಿರ ಉದ್ಘಾಟಿಸಿದರು. ಸತ್ಯ ಸಾಯಿ ಸೇವಾ ಸಮಿತಿ ರಾಜ್ಯ ಮಹಿಳಾ ಸೇವಾ ಸಂಯೋಜಕಿ ಪ್ರಿಯಾ ಪೈ, ಜಿಲ್ಲಾಧ್ಯಕ್ಷ ಪ್ರಸನ್ನ ಎನ್ ಭಟ್, ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಮೂಕಾಂಬಿಕಾ ಎನ್ ರಾವ್, ನಗರಸಭೆ ನೀರಿನ ವಿಭಾಗದ ವಸಂತ, ನೇತ್ರಾಧಿಕಾರಿಗಳಾದ ಡಾ.ಶಾಂತರಾಜು ಮತ್ತು ಡಾ. ಅನಿಲ್ ರಾಮಾನುಜಮ್ ಅತಿಥಿಗಳಾಗಿ ಭಾಗವಹಿಸಿದ್ದರು. ಸತ್ಯ ಸಾಯಿ ಸೇವಾ ಸಮಿತಿಯ ಪದ್ಮನಾಭ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈಂದೂರು ಪ್ರಭಾಕರ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಸತ್ಯ ಸುಂದರ ರಾವ್ ಸ್ವಾಗತಿಸಿದರು. ಪುತ್ತೂರು ಸಮಿತಿ ಶೈಕ್ಷಣಿಕ ಸಂಯೋಜಕಿ ಕಾವ್ಯ ಎಸ್ ಶೆಟ್ಟಿ ವಂದಿಸಿದರು. ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಸಂಚಾಲಕ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here