![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2022/04/1-haneef-bharat-2-1-300x297.jpg)
![](https://puttur.suddinews.com/wp-content/uploads/2022/04/2-hamza-m-222x300.jpg)
ಪುತ್ತೂರು: ಬದ್ರಿಯಾ ಜುಮಾ ಮಸೀದಿ ಪರ್ಪುಂಜ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಮಾಅತ್ ಖತೀಬ್ ಬದ್ರುದ್ದೀನ್ ರಹ್ಮಾನಿ ದುವಾ ನೆರವೇರಿಸಿದರು. ಕಾರ್ಯದರ್ಶಿ ಹಂಝ ಲೆಕ್ಕಪತ್ರ ವಾಚಿಸಿದರು. 2022-23ನೇ ಸಾಲಿನ ಸಮಿತಿಯನ್ನು ಪುನರಾಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹನೀಫ್ ಭಾರತ್, ಉಪಾಧ್ಯಕ್ಷರಾಗಿ ಶರೀಫ್ ಪಿ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಎಂ, ಜೊತೆ ಕಾರ್ಯದರ್ಶಿಯಾಗಿ ರಶೀದ್ ಕೆ, ಲೆಕ್ಕ ಪರಿಶೋಧಕರಾಗಿ ಸಿರಾಜ್ ಜೆಜೆಬಿ, ಆಯ್ಕೆಗೊಂಡರು. ಸಮಿತಿ ಸದಸ್ಯರಾಗಿ ಶರೀಫ್ ಹಾಜಿ, ಮಹಮ್ಮದ್ ಜೆಜೆಬಿ, ನವಾಝ್ ಸುಪ್ರೀಂ, ಅಬ್ದುಲ್ ರಹಿಮಾನ್(ಉಂಬುಚ್ಚ), ನಝೀರ್ ಪಿ, ಅಬೂಬಕ್ಕರ್ ನೆಲ್ಯಾಡಿ, ಸಿದ್ದೀಕ್ ಸೌದಿ, ಹಸೈನಾರ್ ಡಿಂಬ್ರಿ ಅವರನ್ನು ಆಯ್ಕೆ ಮಾಡಲಾಯಿತು. ಮುಅಝ್ಝಿನ್ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.