ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಎ.11ರಂದು ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದ ಪ್ರಧಾನ ಆರ್ಚಕ ವಿಷ್ಣುಮೂರ್ತಿ ಬಡಕಿಲ್ಲಾಯರವರು ಶಾಸಕರ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಶಾಸಕರು ದೇವಸ್ಥಾನದ ಬಳಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅನುದಾನ ನೀಡುವ ಭರವಸೆ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯಧುಶ್ರೀ ಆನೆಗುಂಡಿ, ಸದಸ್ಯರಾದ ಮುರಳಿಕೃಷ್ಣ ಬಡಿಲ, ವಿನಯ ಕುಮಾರ್ ರೈ ಕೊಯಿಲ ಪಟ್ಟೆ, ಸಂಜೀವ ಗೌಡ ಕೊನೆಮಜಲು, ಶ್ರೀರಾಮ ಕೆಮ್ಮಾರ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಪ್ರಮುಖರಾದ ಬಾಲಕೃಷ್ಣ ಗೌಡ ಬೇಂಗದಪಡ್ಪು ಭವಾನಿಶಂಕರ ಪರಂಗಾಜೆ, ರಾಮಯ್ಯ ಗೌಡ ಬುಡಲೂರು, ರಾಮ ನಾಯ್ಕ ಏಣಿತಡ್ಕ, ಸೋಮನಾಥ ಗೌಡ ಪಲ್ಲಡ್ಕ ಪತ್ತಿತರರು ಉಪಸ್ಥಿತರಿದ್ದರು.