\
ಕಾಣಿಯೂರು: ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾಣಿಯೂರು ಶಕ್ತಿ ಕೇಂದ್ರ ಮತ್ತು ಕಾಣಿಯೂರು ಬಿಜೆಪಿ ಬೂತ್ ಸಮಿತಿ ವತಿಯಿಂದ ಕಾಣಿಯೂರಿನಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ|| ಬಿ. ಆರ್. ಅಂಬೇಡ್ಕರ್ ರವರ 131 ನೇ ಜನ್ಮದಿನಾಚರಣೆ ಹಾಗೂ ರೈಲ್ವೆ ನಿಲ್ದಾಣದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಸವಣೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಸುಳ್ಯಮಂಡಲ ಸಹಕಾರಿ ಪ್ರಕೋಷ್ಠದ ಸದಸ್ಯ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಧನಂಜಯ ಕೇನಾಜೆ, ಸಹ ಪ್ರಮುಖ್ ಸುರೇಶ್ ಓಡಾಬಾಯಿ, ಕಾಣಿಯೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸುಂದರ ಬೆದ್ರಾಜೆ, ಕಾರ್ಯದರ್ಶಿ ಸುರೇಶ ಬಂಡಾಜೆ, ಬೊಬ್ಬೆಕೇರಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೆದ್ರಂಗಳ, ಕಾರ್ಯದರ್ಶಿ ಯಶವಂತ್ ಕೇಪುಳಗುಡ್ಡೆ, ಗ್ರಾ.ಪಂ.ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಪ್ರವೀಣ್ ಚಂದ್ರ ರೈ ಕುಮೇರು, ತಾರಾನಾಥ್ ಇಡ್ಯಡ್ಕ, ಲೋಕಯ್ಯ ಪರವ, ಸುಲೋಚನಾ ಮಿಯೋಳ್ಪೆ, ತೇಜಕುಮಾರಿ ಉದ್ಲಡ್ಡ, ಸುನಂದಾ ಅಬ್ಬಡ, ಅಂಬಾಕ್ಷಿ ಕೂರೇಲುಮತ್ತಿತರರು ಉಪಸ್ಥಿತರಿದ್ದರು.