ಪುತ್ತೂರು: ಜಯ ಕರ್ನಾಟಕ ಜನಪರ ವೇದಿಕೆಯ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ರವರು 131 ನೇ ಜನ್ಮ ದಿನಾಚರಣೆಯನ್ನು ಒಳಮೊಗ್ರು ಗ್ರಾಮದ ಕುಂಬ್ರ ಜನತಾ ಕಾಲನಿಯಲ್ಲಿ ಆಚರಿಸಲಾಯಿತು. ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು. ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ, ಕೆದಂಬಾಡಿ ಗ್ರಾಪಂ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿಯವರು ಕಾಲನಿ ಮಂದಿಗೆ ಜಯಕರ್ನಾಟಕ ಜನಪರ ವೇದಿಕೆಯ ಶಾಲು ಹಾಕಿ ಗೌರವಿಸುವ ಮೂಲಕ ಅಂಬೇಡ್ಕರ್ರವರ ತತ್ವ ಆದರ್ಶಗಳ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಜಯಕರ್ನಾಟಕ ಜನಪರ ವೇದಿಕೆಯ ಕಾರ್ಯಕಾರಿಣಿ ಸದಸ್ಯರುಗಳಾದ ಅಮರ್ ರೈ ದರ್ಬೆ, ಮನೋಜ್ ರೈ ಮಠ, ಪ್ರಜ್ವಲ್ ರೈ ಮಿತ್ರಂಪಾಡಿ, ಜನತಾ ಕಾಲನಿ ನಿವಾಸಿಗಳಾದ ಸುಂದರ್, ಚೆನ್ನ ಬಜಳ, ಅಣ್ಣು, ಮಾಯಿಲ ಕುಂಬ್ರ, ಜಯಂತ ಕುಂಬ್ರ, ನಾರಾಯಣ ಕುಂಬ್ರ, ಚೆನ್ನು ಕುಂಬ್ರ, ಹರೀಶ್ ಕುಂಬ್ರ, ಅವಿನಾಶ್ ಕುಂಬ್ರ, ಅಶ್ವತ್ ಕುಂಬ್ರ, ಆನಂದ ಕುಂಬ್ರ, ಬಾಬು ಕಲ್ಲಡ್ಕ ಕುಂಬ್ರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.