ಕೊಂಬಾರು: ಅಂಬೇಡ್ಕರ್ ಜಯಂತಿ ಆಚರಣೆ-ಸ್ವಚ್ಚತಾ ಕಾರ್ಯಕ್ರಮ

0

ಕಡಬ: ಕೊಂಬಾರು ಗ್ರಾಮ ಪಂಚಾಯತ್, ಶಾಲಾಬಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಮೊಗೇರಡ್ಕ ಶಾಲೆ ಹಾಗೂ ವಿವಿಧ ಇಲಾಖೆ ಹಾಗು ವಿವಿಧ ಸಂಘ ಸಂಸ್ಥೆ ಹಾಗು ಶ್ರೀ ಕ್ಷೇತ್ರ ಗ್ರಾಮಾಬಿವೃದ್ಧಿ ಯೋಜನೆ, ಕೆಂಜಾಲದ ನಾಗರಿಕರು ಸೇರಿ ಕೆಂಜಾಳ ಪೇಟೆಯಲ್ಲಿ ಶ್ರೀ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

 


ಗ್ರಾಮಪಂಚಾಯತ್‌ನ ಅಧ್ಯಕ್ಷರು ಹಾಗು ಸರ್ವ ಸದಸ್ಯರು ಹಾಗು ಊರಿನ ಗಣ್ಯ ವ್ಯಕ್ತಿಗಳಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಗುಂಡ್ಯ-ಸುಬ್ರಮಣ್ಯ ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಗಳನ್ನೂ ತೆಗೆದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಸುಶೀಲಾ ಶಿವಪ್ರಸಾದ್ ಉಪಾಧ್ಯಕ್ಷೆ ಸರಿತಾ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರಾಘವೇಂದ್ರ, ಸದಸ್ಯರಾದ ಮಧುಸೂದನ್ ಓಡೋಳಿ, ಜಯಶ್ರೀ ರಾಮಚಂದ್ರ ಗೌಡ, ಚೆನ್ನಕೇಶವ ಗೌಡ ಕೈಂತಿಲ, ಗಣೇಶ್ ಪಿಲಿಕಜೆ, ಸದಾನಂದ, ಸುಜಾತಾ. ಮೊಗೇರಡ್ಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಶಶಿಧರ ಬೊಟ್ಟಡ್ಕ, ಅಂಗನವಾಡಿ ಕಾರ್ಯಕರ್ತೆಯರಾದ ಪಾರ್ವತಿ, ಕವಿತಾ, ಜಯಶ್ರೀ, ಗೀತಾ, ವನಜಾಕ್ಷಿ, ಕು. ಶೀಲಾ, ಆಶಾ ಕಾರ್ಯಕರ್ತೆಯರಾದ ಶೋಭಾ, ಮೀನಾಕ್ಷಿ, ಶ್ಯಾಮಲ, ಕಿರಿಯ ಅರೋಗ್ಯ ಸಹಾಯಕಿ ವಿಜಯ, ಸಮುದಾಯ ಅರೋಗ್ಯ ಅಧಿಕಾರಿ ಲಿಖಿತ ಪಿ.ಎಸ್. ಹಾಗು ಎಂ.ಬಿ.ಕೆ ಜಯಶ್ರೀ, ಎಲ್.ಸಿ.ಆರ್.ಪಿ.ಗಳಾದ ಶ್ವೇತಾ, ಭವ್ಯ, ಮತ್ತು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಎಸ್. ಮೊಗೇರಡ್ಕ ಶಾಲಾ ಶಿಕ್ಷಕರಾದ ಲತಾ, ಎಸ್,ಕೆ,ಡಿ.ಆರ್.ಡಿ.ಪಿ.ಯ ಸೇವಾ ಪ್ರತಿನಿದಿಯಾದ ವಿನೋದ್ ಹಾಗು ನಾಗೇಶ್ ಕಾಪಾರು, ಉಮೇಶ್ ಕೊಂಬಾರುಗದ್ದೆ ಹಾಗು ಮೊಗೇರಡ್ಕ ಶಾಲೆಯ ಎಲ್ಲಾ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗು ಊರಿನ ನಾಗರಿಕರು ಕೆಂಜಾಲದ ಎಲ್ಲಾ ಅಂಗಡಿ ಮಾಲಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಜನಾರ್ದನ ಸುಜಾತಾ, ಅಶ್ವಥ್ ಗ್ರಾಮ ಸಹಾಯಕ ರಾಧಾಕೃಷ್ಣ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here