ಪುತ್ತೂರು : ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಬಿ.ಆರ್. ಅಂಬೇಡ್ಕರ್ರವರ ೧೩೧ ನೇ ಜನ್ಮ ದಿನಾಚರಣೆಯನ್ನು ಸಂಘದ ಸಭಾ ಭವನದಲ್ಲಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಶಿವಪ್ಪ ನಾಯ್ಕರವರು ಅಂಬೇಡ್ಕರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಸರಳ ಸಮಾರಂಭದಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ, ನಿವೃತ್ತ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಸುಂದರ ನಾಯ್ಕ, ನ್ಯಾಯವಾದಿ ಮಂಜುನಾಥ್ ಯನ್.ಯಸ್ರವರು ಮಾತನಾಡಿ ಅಂಬೇಡ್ಕರವರು ದೇಶಕ್ಕೆ, ದಲಿತ ವರ್ಗಕ್ಕೆ ನೀಡಿದ ಸೇವೆ ಮತ್ತು ಹೋರಾಟದ ಬಗ್ಗೆ ಹೇಳಿದರು. ಸಮಘದ ಅಧ್ಯಕ್ಷ ಶಿವಪ್ಪ ನಾಯ್ಕರವರು ಮಾತನಾಡಿ ಅಂಬೇಡ್ಕರವರ ತತ್ವಗಳನ್ನು ಅವರು ತಮ್ಮ ಜೀವನದ ಕೊನೆಕ್ಷಣದಲ್ಲಿ ದಲಿತ ಸಮಾಜಕ್ಕೆ ನೀಡಿದ ಸಂದೇಶಗಳನ್ನು ನಮ್ಮ ಜೀವದಲ್ಲಿ ಅಳವಡಿಸಿದಾಗ ಮಾತ್ರ ಅವರ ಜನ್ಮದಿನಾಚರಣೆಗೆ ನಿಜವಾದ ಅರ್ಥವಿದೆ, ಶಿಕ್ಷಿತರಾದ ನಾವೆಲ್ಲ ದೀನ ದಲಿತರ ನೋವಿಗೆ ನಮಗೆ ಸಾಧ್ಯವಾದಷ್ಟು ಸಹಾಯ ಮಾಡೋಣ ಎಂದು ಹೇಳಿದರು. ಕಾರ್ಯದರ್ಶಿ ಕರುಣಾಕರ್ ಸ್ವಾಗತಿಸಿ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ವಂದಿಸಿದರು. ಮಹಿಳಾ ವೇದಿಕೆ ಅಧ್ಯಕ್ಷರು ಯುವ ವೇದಿಕೆ ಸದಸ್ಯರು, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.