ನಾಳೆ(ಎ.16)ಕ್ಕೆ ಉಳ್ಳಾಲ್ತಿ ಅಮ್ಮನಿಗೆ ಮಲ್ಲಿಗೆ ಸಮರ್ಪಣೆ

0

  • ಹಿಂಜಾವೇಯಿಂದ 10 ಕಡೆ ಮಲ್ಲಿಗೆ ಸ್ಟಾಲ್‌ಗಳು

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದಲ್ಲಿ ಎ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರಲಿರುವ ಸಂದರ್ಭ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಭಕ್ತರಿಂದ ಮಲ್ಲಿಗೆ ಸಮರ್ಪಣೆಗಾಗಿ ಹಿಂದು ಜಾಗರಣಾ ವೇದಿಕೆಯಿಂದ ಪೇಟೆಯಲ್ಲಿ 10 ಕಡೆ ಮಲ್ಲಿಗೆ ಸ್ಟಾಲ್ ತೆರೆಯಲಾಗಿದೆ.

ಸಂಜೀವ ಶೆಟ್ಟಿ ಜವುಳಿ ಅಂಗಡಿಯ ಹಳೆ ಮಳಿಗೆ, ಜಿ.ಎಲ್ ಚಿನ್ನದ ಅಂಗಡಿ, ಲಕ್ಷ್ಮೀ ಮೆಟಲ್ಸ್, ಚಂದು ಶೆಟ್ಟಿ ಅಂಗಡಿ, ಶ್ರೀಧರ್ ಭಟ್, ಪಂಚವಟಿ ತಿರುವು, ಕಿಲ್ಲೆ ಮೈದಾನ, ಮಹಿಳಾ ಪೊಲೀಸ್ ಸ್ಟೇಶನ್ ಬಳಿಯಲ್ಲಿ ಮತ್ತು ಮಯೂರ ಇನ್ಲೆಂಡ್, ಹಳೆಯ ಗ್ರಾಮಚಾವಡಿ ಎದುರು ಮಲ್ಲಿಗೆ ಸ್ಟಾಲ್‌ಗಳನ್ನು ತೆರೆಯಲಾಗುತ್ತದೆ. ಹಿಂದು ಸಮಾಜ ಬಾಂಧವರು ಸಹಕರಿಸುವಂತೆ ಹಿಂದು ಜಾಗರಣ ವೇದಿಕೆ ನಗರ ಘಟಕದ ಪದಾಧಿಕಾರಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here