ಪುತ್ತೂರು: ಜೇಸಿಐ ಉಪ್ಪಿನಂಗಡಿ ಘಟಕದ ವತಿಯಿಂದ ಡಾ|ಬಿ.ಆರ್ ಅಂಬೇಡ್ಕರ್ರವರ 131ನೇ ಜಯಂತಿಯನ್ನು ಬಜತ್ತೂರು ಗ್ರಾಮದ ಕಾಂಚನ ಬಿದಿರಾಡಿ ಕಾಲೋನಿಯಲ್ಲಿ ಆಚರಿಸಲಾಯಿತು. ಘಟಕಾಧ್ಯಕ್ಷ ಜೇಸಿ ಎಈಒ ಮೋಹನ್ ಚಂದ್ರ ತೋಟದ ಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ದುಡಿದ ಶಕ್ತಿಯಾಗಿದ್ದರು.
ಅವರು ಮಾನವ ಕುಲದ ಅಭ್ಯುದಯಕ್ಕೆ ಜೀವನವನ್ನೇ ಮುಡಿಪಾಗಿಟ್ಟರು. ಅವರ ಸಾಧನೆಗಳು ಬದುಕಿಗೆ ಪ್ರೇರಣೆಯಾಗಿದೆ ಎಂದರು. ಜೇಸಿ ಸದಸ್ಯ ಪುನೀತ್ ಮಂಜಿಪಲ್ಲ ಮಾತನಾಡಿ ಅಂಬೇಡ್ಕರ್ರ ಹುಟ್ಟುಹಬ್ಬ ಆಚರಣೆ ಮಾನವ ಸಮುದಾಯಕ್ಕೆ ಹೊಸ ಚೈತನ್ಯವನ್ನು ತಂದುಕೊಡುತ್ತದೆ ಎಂದರು. ಘಟಕದ ವರ್ಷದ ಶಾಶ್ವತ ಯೋಜನೆಯ ನಿರ್ದೇಶಕ ಮಹೇಶ್ ಖಂಡಿಗ ಮಾತನಾಡಿ ಸರ್ವರ ಏಳಿಗೆಗೆ ಶ್ರಮಿಸಿದ ಧೀಮಂತ ನಾಯಕ ಎಂದರು. ಪ್ರಶಾಂತ್ ಬಿದಿರಾಡಿ ವಂದಿಸಿದರು. ಸುಗುಣ, ದಿವಾಕರ, ಪಿಜಿನಾ, ರಮೇಶ್, ಯಲ್ಲಪ್ಪ, ನೋಣಯ್ಯ, ಗಿರಿಜಾ, ಆನಂದ ಸೇರಿದಂತೆ 25 ಮಿಕ್ಕಿ ಕಾಲೋನಿ ನಿವಾಸಿಗಳು ಪಾಲ್ಗೊಂಡಿದ್ದರು. ಜೇಸಿ ಸದಸ್ಯರಾದ ಪುರುಷೋತ್ತಮ, ಪದ್ಮನಾಭ ಸಹಕರಿಸಿದರು.