ಸವಣೂರು: ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀಧರ್ಮರಸು ಉಳ್ಳಾಕುಲು ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಎ.22ರಿಂದ ಎ.24ರವರೆಗೆ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ದೈವಸ್ಥಾನದಲ್ಲಿ ಗೊನೆಮುಹೂರ್ತ ನೆರವೇರಸಲಾಯಿತು.
ಈ ಸಂದರ್ಭ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ, ವಿನೋದ್ ರೈ ಪಾಲ್ತಾಡು, ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು, ಮೋನಪ್ಪ ಗೌಡ ಪಾರ್ಲ, ಸೀತಾರಾಮ ರೈ ಕಲಾಯಿ, ವಿಠಲ ಶೆಟ್ಟಿ ಪಾಲ್ತಾಡಿ, ಪ್ರವೀಣ್ ರೈ ನಡುಕೂಟೇಲು, ಕಾರ್ಯದರ್ಶಿ ವಿನಯಚಂದ್ರ ಕೆಳಗಿನ ಮನೆ, ಜತೆ ಕಾರ್ಯದರ್ಶಿ ವಿದ್ಯಾಧರ ಗೌಡ ಪಾರ್ಲ, ಕರುಣಾಕರ ಸಾಲ್ಯಾನ್ ಕಲ್ಲಕಟ್ಟ, ಕೋಶಾಧಿಕಾರಿ ಜಯರಾಮ ಗೌಡ ದೊಡ್ಡಮನೆ, ದೈವಸ್ಥಾನಕ್ಕೆ ಸಂಬಂದಪಟ್ಟ ಆರು ಮನೆಯ ಪ್ರಮುಖರಾದ ನರಸಿಂಹ ಪಕ್ಕಳ ಗುತ್ತಿನಮನೆ, ಜನಾರ್ಧನ ಗೌಡ ಕೆಳಗಿನ ಮನೆ, ತಿಮ್ಮಪ ಗೌಡ ದೊಡ್ಡಮನೆ, ಅಶೋಕ್ ಗೌಡ ಖಂಡಿಗೆ, ರಾಮಕೃಷ್ಣ ಗೌಡ ಅಂಗಡಿಹಿತ್ಲು, ಮುಂಡಪ್ಪ ಪೂಜಾರಿ ಬೊಳಿಯಾಲ ಹಾಗೂ ಭಕ್ತಾಧಿಗಳು, ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಸದಸ್ಯರು ಮೊದಲಾದವರಿದ್ದರು.