- ಏ.24ರಂದು ಪ್ರಶಸ್ತಿ ಪ್ರದಾನ
ಮಂಗಳೂರು: ಏಪ್ರಿಲ್ 24ರ ರಾಷ್ಟೀಯ ಪಂಚಾಯತ್ ದಿನಾಚರಣೆ ಅಂಗವಾಗಿ ಪ್ರತೀ ವರ್ಷವೂ ಉತ್ತಮ ಕಾರ್ಯಚಟುವಟಿಕೆಯಲ್ಲಿರುವ ಒಂದು ರಾಜ್ಯದ ಒಂದು ಜಿಲ್ಲಾ ಪಂಚಾಯತ್ನ್ನು ಗುರುತಿಸಿ ಕೊಡಲಾಗುವ ರಾಷ್ಟ್ರ ಪ್ರಶಸ್ತಿಗೆ ಈ ಬಾರಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ. ಜಿಲ್ಲೆಯ ಕಾರ್ಯಕ್ಷಮತೆ, ಪ್ರಗತಿಥಿಯನ್ನು ಆಧರಿಸಿ ಸರ್ಕಾರದಿಂದ ಕೊಡಮಾಡುವ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ್ ಪುರಸ್ಕಾರ 2022 ದಕ ಜಿಲ್ಲಾ ಪಂಚಾಯತ್ ಮುಡಿಗೇರಿದ್ದು ಎ.೨೪ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸ್ವಚ್ಛ ಭಾರತ್ ಅಭಿಯಾನ, ಕುಡಿಯುವ ನೀರಿನ ಯೋಜನೆ, ಗ್ರಂಥಾಲಯ ನಿರ್ವಹಣೆ-ನವೀಕರಣ, ಅಭಿವೃದ್ಧಿಗಾಗಿ ಬಳಸುವ ಅನುದಾನ ಮುಂತಾದವುಗಳನ್ನು ಗಣನೆಗೆ ತೆಗೆದುಕೊಂಡು ಈ ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತಿದ್ದು ನಮ್ಮ ಜಿಲ್ಲಾ ಪಂಚಾಯತ್ ಉತ್ತಮ ಕಾರ್ಯನಿರ್ವಹಣೆ ಮಾಡಿರುವುದರಿಂದ ಈ ಬಾರಿ ಪ್ರಶಸ್ತಿ ಒದಗಿ ಬಂದಿದೆ. – ಡಾ. ಕುಮಾರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ