ಬಡಗನ್ನೂರುಃ ಶ್ರೀ ಕ್ಷೇತ್ರ ಪಡುಮಲೆ ಶ್ರೀ ಕೂವೆ ಶಾಸ್ತಾರ ಶಾಸ್ತಾರ ಗುಡಿಗೆ ಮಾರ್ಕಿಂಗ್ ಮಾಡುವ ಕೆಲಸ ಏ. 22 ರಂದು ನಡೆಯಿತು. ಏ. 22 ರಂದು ಬೆಳಗ್ಗೆ 8.30 ರ ಶುಭ ಮುಹೂರ್ತದಲ್ಲಿ ಕ್ಷೇತ್ರದ ಶಿಲ್ಪಿ ಬೆದ್ರಡ್ಕ ಶ್ರೀ ರಮೇಶ ಕಾರಂತರ ನೇತೃತ್ವದಲ್ಲಿ ಸ್ಥಳ ಗುರತು ಮಾಡಲಾಯಿತು.
ಏ.24 ರಂದು ಶಿಲಾನ್ಯಾಸ ಮತ್ತು ಗರ್ಭಗುಡಿಯ ಪಾದುಕನ್ಯಾಸ ಕಾರ್ಯಕ್ರಮ:- ಪಡುಮಲೆ ಶ್ರೀ ಕೂವೆ ಶಾಸ್ತಾರ ಗುಡಿಗೆ ಶಿಲಾನ್ಯಾಸ ಹಾಗೂ ವಿಷ್ಣುಮೂರ್ತಿ ದೇವರ ಗರ್ಭಗುಡಿಯ ಪಾದುಕನ್ಯಾಸ ಕಾರ್ಯಕ್ರಮವು ಕ್ಷೇತ್ರ ತಂತ್ರಿವರ್ಯಾರಾದ ಬ್ರಹ್ಮಶ್ರೀ ಕುಂಟಾರು ವೇದಮೂರ್ತಿ ವಾಸುದೇವ. ತಂತ್ರಿಯವರ ಮಾರ್ಗದರ್ಶನ ಬ್ರಹ್ಮಶ್ರೀ ಕುಂಟಾರು ವೇದಮೂರ್ತಿ ರವೀಶ ತಂತ್ರಿಗಳ ನೇತೃತ್ವದಲ್ಲಿ ಏ.24 ರಂದು ಬೆಳಗ್ಗೆ ಗಂ 9 ಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಾಚ್ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ