ಕರೆಮನೆಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಅವಿರೋಧ ಆಯ್ಕೆ

0

ಪುತ್ತೂರು:ನರಿಮೊಗರು ಕರೆಮನೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಯ ಎಲ್ಲಾ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಒಟ್ಟು  ಸ್ಥಾನಗನ್ನು ಹೊಂದಿರುವ ಆಡಳಿತ ಮಂಡಳಿಗೆ ಸಾಮಾನ್ಯ ಸ್ಥಾನದಿಂದ ಸುದರ್ಶನ್ ನಾಡಾಜೆ, ಕೆ. ವಿಜಯ ಕುಮಾರ್ ಕೈಪಂಗಳ, ಆನಂದ ಸಾಲಿಯಾನ್ ನಡುಬೈಲು, ಪುಷ್ಪಾ ಕೆ. ಕೇದಗೆದಡಿ, ವೇದಾವತಿ ಕೈಪಂಗಳ, ಬಿ.ಸೀತಾರಾಮ ಬರೆಮನೆ, ಬಿ.ಎಸ್ ಸುಬ್ರಾಯ ಶೆಟ್ಟಿಮಜಲು, ಮಹಿಳಾ ಸ್ಥಾನದಿಂದ ಶಿವಮ್ಮ ಕೈಪಂಗಳ ಬೊಳ್ಳಮೆ, ಮಲ್ಲಿಕಾ ಜಯರಾಮ್ ಮರತ್ತಡ್ಕ, ಹಿಂದುಳಿದ ವರ್ಗ `ಎ’ ಸ್ಥಾನದಿಂದ ವಸಂತ ಪೂಜಾರಿ ನಾಡಾಜೆ, ಹಿಂದುಳಿದ ವರ್ಗ `ಬಿ’ ಸ್ಥಾನದಿಂದ ವಿಶ್ವನಾಥ ಗೌಡ ನಡುಬೈಲು ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಕೆ.ಚೋಮ ನಾಯ್ಕ ಕೇದಗೆದಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇರುವುದರಂದ ಆ ಸ್ಥಾನವು ಖಾಲಿಯಿದೆ. ಸಹಕಾರ ಸಂಘಗಳ ಸಹಾಯ ನಿಬಂಧಕರ ಕಚೇರಿ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here