ಪರ್ಪುಂಜ ಸೌಗಂಧಿಕದಲ್ಲಿ ಮಕ್ಕಳಿಗಾಗಿ ವಿಶೇಷ ಶಿಬಿರ

0

ಪುತ್ತೂರು: ಪರ್ಪುಂಜದ ಸೌಗಂಧಿಕಾದ ಆವರಣದಲ್ಲಿ ಮೇ ೧ ರಿಂದ ೧೦ರ ವರೆಗೆ ಮಕ್ಕಳಿಗಾಗಿ ವಿಶೇಷ ಶಿಬಿರ `ಸಂವರ್ಧನ’ ನಡೆಯಲಿದೆ. ಸಸ್ಯ ಸಂವರ್ಧನೆ, ಕರಕುಶಲ ತಯಾರಿ, ಮಕ್ಕಳ ರಂಗಭೂಮಿ, ಮುಖವಾಡಗಳ ರಚನೆ, ಪ್ರಕೃತಿ ಪರಿಚಯ, ಚಿತ್ರಕಲೆ, ಪಕ್ಷಿ ವೀಕ್ಷಣೆ ಹೀಗೆ ಹಲವು ಕುತೂಹಲಕಾರಿ ವಿಚಾರಗಳ ಬಗ್ಗೆ ಆಯಾ ಕ್ಷೇತ್ರದ ಪರಿಣತರು ಮಾಹಿತಿ-ಮಾರ್ಗದರ್ಶನ ನೀಡಲಿದ್ದಾರೆ. ಶಿಬಿರ ಗಿಡಮರಗಳ ನಡುವಿನ ತಾಣದಲ್ಲಿ ಪ್ರತಿ ದಿನ ಬೆಳಿಗ್ಗೆ 9ರಿಂದ ಸಂಜೆ ೫ರ ವರೆಗೆ ನಡೆಯಲಿದ್ದು ಕೊನೆಯಲ್ಲಿ ಮಕ್ಕಳು ನಾಟಕವೊಂದನ್ನು ಸಾದರಪಡಿಸಲಿದ್ದಾರೆ. ಸೌಗಂಧಿಕದಲ್ಲಿರುವ ಸಸ್ಯವೈವಿಧ್ಯ, ನಾನಾ ಬಗೆಯ ವಾಟರ್ ಲಿಲ್ಲಿಗಳು, ಹಕ್ಕಿ ಗೂಡು, ಮುಜಂಟಿ ಜೇನು ಕುಟುಂಬಗಳು ಇವೆಲ್ಲ ಶಿಬಿರಾರ್ಥಿಗಳಿಗೆ ಅನನ್ಯ ಅನುಭವವನ್ನು ತಂದುಕೊಡಲಿವೆ. ಹೆಚ್ಚಿನ ಮಾಹಿತಿಗಾಗಿ ಚಂದ್ರ ಸೌಗಂಧಿಕ ಮೊ.9900409380 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here