ಕಡಬ: ದಿನಸಿ ಅಂಗಡಿಯಿಂದ ೪ ಲಕ್ಷ ರೂ.ನಗದು ಕಳವು

0

ಪುತ್ತೂರು: ಕಡಬದ ದಿನಸಿ ಅಂಗಡಿಯೊಂದರಿಂದ ೪ ಲಕ್ಷ ರೂ.ನಗದು ಕಳವಾಗಿರುವುದಾಗಿ ಕಡಬ ಪೊಲೀಸರಿಗೆ ದೂರು ನೀಡಲಾಗಿದೆ.
ಕಳಾರ ಮೊಯ್ದೀನ್ ಕುಂಞಿ ಎಂಬವರ ಮಗ ಇಸ್ಮಾಯಿಲ್ ಎಂಬವರ ಅಂಗಡಿಯಿಂದ ಈ ಕೃತ್ಯ ಎಸಗಲಾಗಿದೆ.ಅವರು ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ಫೆ.೨೭ರ ರಾತ್ರಿ ಕಳವು ಮಾಡಲಾಗಿದೆ.ಪರಿಚಯದ ಡಿ.ಇಸ್ಮಾಯಿಲ್ ಎಂಬವರ ಮನೆಯನ್ನು ಲೀಸಿಗೆ ಪಡೆದುಕೊಂಡಿದ್ದ ಹುಸೈನ್ ಎಂಬವರು ಅವರಿಗೆ ನೀಡಿದ್ದ ೩ ಲಕ್ಷ ರೂ.ಹಾಗೂ ಅಂಗಡಿಯಲ್ಲಿ ಕೂಡಿಟ್ಟಿದ್ದ ೧ ಲಕ್ಷ ರೂ.ಸೇರಿದಂತೆ ಒಟ್ಟು ೪ ಲಕ್ಷ ರೂ.ಗಳನ್ನು ಯಾರೋ ಕಳ್ಳರು ಅಂಗಡಿಗೆ ನುಗ್ಗಿ ಕಳವು ಮಾಡಿಕೊಂಡು ಹೋಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here