ಬೆಳ್ಳಿಪ್ಪಾಡಿ ಶಾಲಾ ಆರಂಭೋತ್ಸವ

0

ಪುತ್ತೂರು : ಬೆಳ್ಳಿಪಾಡಿ ಹಿ.ಪ್ರಾ. ಶಾಲಾ ಆರಂಭೋತ್ಸವ ನಡೆಯಿತು. ಮಕ್ಕಳನ್ನು ಅಂಗನವಾಡಿ ಕೇಂದ್ರದಿಂದ ಆರತಿ ಮಾಡಿ ಬ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ಕರೆತಂದು ಹೂಗುಚ್ಛ ನೀಡಿ, ಆರತಿ ಮಾಡಿ ತಿಲಕ ಇಟ್ಟು ಬರಮಾಡಿಕೊಳ್ಳಲಾಯಿತು. ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಗೌಡ ಗುಂಡೋಲೆ ಶುಭಹಾರೈಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಅಶ್ರಫ್ ವಿದ್ಯಾಪ್ರವೇಶ ಕಲಿಕಾ ಚೇತರಿಕಾ ವರ್ಷ ೨೦೨೨ -೨೩ರ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಭವ್ಯ ವಿ. ಶೆಟ್ಟಿ ಮತ್ತು ಗೌರವ ಶಿಕ್ಷಕಿ ವೈಶಾಲಿಡಿವರ ಪ್ರಾಯೋಜಕತ್ವದಲ್ಲಿ ನೀಡಲ್ಪಟ್ಟ ನೋಟ್ ಪುಸ್ತಕ, ಕ್ರೆಯನ್ಸ್, ಮತ್ತು ಪೆನ್ಸಿಲ್‌ಗಳನ್ನು ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ ಗೌಡರವರು ಮಕ್ಕಳಿಗೆ ವಿತರಿಸಿದರು. ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಅನ್ಯ ಕಾರ್ಯ ನಿಮಿತ್ತ ತೆರಳಿದರು
ಭಾರತೀಯ ಜೀವ ವಿಮಾ ನಿಗಮದಡಿಯಲ್ಲಿ ನಿರ್ಮಿಸಲ್ಪಟ್ಟ ನೂತನ ಶೌಚಾಲಯದ ಉದ್ಘಾಟನೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಪೂಜಾರಿ ಮತ್ತು ಎಲ್‌ಐಸಿ ಪ್ರಬಂಧಕ ಬಾಲಕೃಷ್ಣ ಡಿ. ಉದ್ಘಾಟಿಸಿದರು.

 

ಎಸ್‌ಡಿಎಂಸಿ ಅಧ್ಯಕ್ಷ ಭವ್ಯ ವಿ. ಶೆಟ್ಟಿ, ಉಪಾಧ್ಯಕ್ಷ ರವಿ, ಎಲ್‌ಐಸಿ ಉಪ ಪ್ರಬಂಧಕ ಕೆ. ಶಿವಪ್ರಸಾದ್, ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ, ನಿವೃತ್ತ ಮುಖ್ಯ ಗುರು ಯಶೋಧ ಕೆ.ಎಸ್, ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಯಶೋಧ ಎನ್.ಎಂ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ನಾಯ್ಕ ವಂದಿಸಿದರು. ಸಹಶಿಕ್ಷಕಿ ಜಯಂತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸಲೀನಾ ಎಂ, ಅತಿಥಿ ಶಿಕ್ಷಕಿ ರಮ್ಯಶ್ರೀ ಜಿ, ಗೌರವ ಶಿಕ್ಷಕಿ ವೈಶಾಲಿ, ಕಂಪ್ಯೂಟರ್ ಶಿಕ್ಷಕಿ ರಮ್ಯಾ ಸಹಕರಿಸಿದರು. ಸಹಶಿಕ್ಷಕಿ ಸಲೀನ ಎಂ. ಸಿಹಿತಿಂಡಿಯ ಪ್ರಾಯೋಜಕತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here