![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು:ಸ.ಹಿ.ಪ್ರಾಥಮಿಕ ಶಾಲೆ ಪಳ್ಳತ್ತಾರಿನಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ‘ಬನ್ನಿ ಬನ್ನಿ ನಲಿಯೋಣ…ಶಾಲೆಗೆ ಬನ್ನಿ ಕಲಿಯೋಣ…’ ಎಂಬ ಘೋಷಣೆ ಕೂಗುತ್ತಾ ಮಕ್ಕಳು ಪಳ್ಳತ್ತಾರು ಜಂಕ್ಷನ್ ತನಕ ಮೆರವಣಿಗೆಯಲ್ಲಿ ಸಾಗಿದರು.ಸಿಹಿತಿಂಡಿ ಹಂಚುವ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಶಾಫಿ ಅಧ್ಯಕ್ಷತೆ ವಹಿಸಿದರು.ಬೆಳಂದೂರು ಪಂಚಾಯತ್ ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಇತ್ತೀಚೆಗೆ ಮುಖ್ಯ ಗುರುಗಳಾಗಿ ಅಧಿಕಾರ ವಹಿಸಿಕೊಂಡ ಸೀತಾರಾಮ ಕೆ.ಜಿ ಇವರು ಕಲಿಕಾ ಚೇತರಿಕೆ ಹಾಗೂ ಮಳೆ ಬಿಲ್ಲು ಕಾರ್ಯಕ್ರಮದ ಬಗ್ಗೆ ಸಮಗ್ರವಾಗಿ ವಿವರಿಸಿದರು.
ಬೆಳಂದೂರು ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ,ಅಧ್ಯಾಪಕ ಕುಶಾಲಪ್ಪ ಗೌಡ,ಪಳ್ಳತ್ತಾರು ಮಸೀದಿ ಕಾರ್ಯದರ್ಶಿ ನವಾಝ್ ಸಖಾಫಿ ಶುಭ ಹಾರೈಸಿದರು.
ಶಾಲೆಗೆ ಅಗತ್ಯ ಪೀಠೋಪಕರಣಗಳನ್ನು ಖರೀದಿಸಲು ಪಂಚಾಯತ್ ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ ಮೂರು ಸಾವಿರ ರೂಪಾಯಿ ಧನಸಹಾಯ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಝೀರ್ ದೇವಸ್ಯ, ಅಬೂಬಕ್ಕರ್ ಫಾಳಿಲಿ,ಶಂಸುದ್ದೀನ್ ಇಂಜಿನಿಯರ್,ಶಿಕ್ಷಕಿ ಸರೋಜ,ಅಡುಗೆ ಸಿಬ್ಬಂದಿಗಳಾದ ಸರೋಜಿನಿ ,ಸುನಂದಾ ಸೇರಿದಂತೆ ಎಸ್ ಡಿ ಎಂ ಸಿ ಪದಾಧಿಕಾರಿಗಳು,ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.ಶಿಕ್ಷಕಿ ಝರೀನಾ ಸ್ವಾಗತಿಸಿ ರಂಗನಾಥ್ ಸರ್ ವಂದಿಸಿದರು.