ಸರ್ವೆ ಎಸ್.ಜಿ.ಎಂ ಪ್ರೌಢ ಶಾಲಾ ನೂತನ ಮೇಲುಸ್ತುವಾರಿ ಸಮಿತಿ ರಚನೆ-ಅಧ್ಯಕ್ಷರಾಗಿ ಅಶೋಕ್ ಎಸ್.ಡಿ ಆಯ್ಕೆ

0

ಪುತ್ತೂರು: ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ನೂತನ ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಶೋಕ್ ಎಸ್.ಡಿ ಹಾಗೂ ಉಪಾಧ್ಯಕ್ಷರಾಗಿ ಭವಾನಿಯವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ರಾಧಾಕೃಷ್ಣ ಭಟ್, ವಿಶ್ವನಾಥ ಕುಲಾಲ್, ಕೇಶವ ವಿ.ಕೆ, ಹರಿಣಾಕ್ಷಿ, ಕಾವ್ಯ, ಲಕ್ಷ್ಮಣ ಆಚಾರ್ಯ ಭಕ್ತಕೋಡಿ, ಹಮೀದ್, ಪುರುಷೋತ್ತಮ ಆಚಾರ್ಯ, ಲಿಂಗಪ್ಪ ಗೌಡ, ವಾಸು ಬಿ.ಎಂ, ಶಕುಂತಳಾ, ಜಯಶ್ರೀ, ಜಯಂತಿ, ಬೇಬಿ ಹಾಗೂ ಪ್ರೇಮಾವತಿಯವರನ್ನು ಆಯ್ಕೆ ಮಾಡಲಾಯಿತು.

 

ನಿಕಟಪೂರ್ವ ಅಧ್ಯಕ್ಷ ಸುರೇಶ್ ಆಚಾರ್ಯ ಶುಭ ಹಾರೈಸಿದರು. ನೂತನ ಅಧ್ಯಕ್ಷ ಅಶೋಕ್ ಎಸ್.ಡಿ ಮಾತನಾಡಿದರು. ಶಾಲಾ ಸಂಚಾಲಕರಾದ ಡಾ. ಯಾದವಿ ಜಯಕುಮಾರ್, ಮುಖ್ಯ ಶಿಕ್ಷಕಿ ಜಯಶ್ರೀ ಶ್ರೀನಿವಾಸ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು, ಮಹಾಬಲ ರೈ ಮೇಗಿನಗುತ್ತು, ಜಯಂತ್ ಬೇಕಲ್ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿಯ ನಿಕಟ ಪೂರ್ವ ಉಪಾಧ್ಯಕ್ಷೆ ಕುಸುಮಾವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here