ಪುತ್ತೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಉತ್ತಮ ಫಲಿತಾಂಶ ಬಂದಿದ್ದು ಅತ್ಯಧಿಕ ಅಂಕಪಡೆದುಕೊಂಡ ಮೂವರು ವಿದ್ಯಾರ್ಥಿಗಳನ್ನು ಶಿಕ್ಷಣ ಸಚಿವರು ಸನ್ಮಾನಿಸಿದರು.
2009-20 ಸಾಲಿನಲ್ಲಿ 46 ಶೇಕಡಾ ಫಲಿತಾಂಶಪಡೆದುಕೊಂಡಿತ್ತು. ಕೆಪಿಎಸ್ ಸ್ಕೂಲ್ ಆಗ ಮೇಲ್ದರ್ಜೆಗೇರಿದ ಬಳಿಕ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ 77.3% ಫಲಿತಾಂಶವನ್ನು ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆಯನ್ನು ಮಾಡಿದೆ. ಅತ್ಯಧಿಕ ಅಂಕಪಡೆದ ಖದೀಜತ್ ಶಮ್ಲಾ (554) ಆಯಿಷತ್ ಅರ್ಫಾನ(543) ಹಗೂ ವೀಕ್ಷಾ (535) ರವರನ್ನು ಕುಂಬ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹಾಗೂ ಕೆಪಿಎಸ್ ಸ್ಕೂಲ್ ಅಧ್ಯಕ್ಷರಾದ ಶಾಸಕ ಸಂಜೀವ ಮಠಂದೂರುರವರು ಶಾಲು ಹೊದಿಸಿ ಗುಲಾಬಿ ಹೂ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು.