ಪುತ್ತೂರು:ಎಪಿಎಂಸಿ ರಸ್ತೆಯಲ್ಲಿನ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳಲ್ಲೊಂದಾದ ಕ್ರಿಸ್ಟೋಫರ್ ಜಿಮ್ ಸೆಂಟರ್ ಗೆ ಸ್ಯಾಂಡಲ್ ವುಡ್, ಟಾಲಿವುಡ್, ಕೋಸ್ಟಲ್ ವುಡ್ ಚಿತ್ರನಟ ಮನೋಜ್ ರವರು ಇತ್ತೀಚೆಗೆ ಭೇಟಿ ನೀಡಿ ಜಿಮ್ ಸೆಂಟರ್ ನಲ್ಲಿನ ಸೌಲಭ್ಯಗಳ ಹಾಗೂ ವಿಶಿಷ್ಟತೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಚಿತ್ರನಟ ಮನೋಜ್ ರವರು ಮೂಲತ ಪುತ್ತೂರಿನ ಮಿತ್ತೂರು ನಿವಾಸಿಯಾಗಿದ್ದು ತುಳು ಸಿನಿಮಾಗಳಾದ ಕುಡ್ಲ ಕೆಫೆ, ಪವಿತ್ರ, ಕನ್ನಡ ಸಿನೆಮಾಗಳಾದ ಹ್ಯಾಪಿ ಜರ್ನಿ, ಕುಮಾರಿ 21F, ಪರಸಂಗ,ರಿವೀಲ್, ಕೋಟಿಗೊಬ್ಬ-3, ತೆಲುಗು ಚಿತ್ರಗಳಾದ ಎಂತವರಲೈನಾ ಚಿತ್ರಗಳಲ್ಲಿ ನಾಯಕನಾಗಿ, ಖಳನಾಯಕನಾಗಿ ನಟಿಸಿದ್ದಾರೆ. ಇವರು ನಟಿಸಿರುವ ಕನ್ನಡ ಚಿತ್ರಗಳಾದ ಸೀತಾ ಸರ್ಕಲ್, 14 ಡೇಸ್ ಲವ್, ಗಾಜನೂರು, ಕಾಲನಾಗಿಣಿ, ಮರಳಿ ಮನಸ್ಸಾಗಿದೆ, ತೆಲುಗು ಚಿತ್ರ ಇಂಕ ಎದೊ ಕಾವಲಿ, ಐರಾವನಾ ಚಿತ್ರಗಳು ತೆರೆ ಕಾಣಲಿಕ್ಕಿವೆ. ಒಂದು ತಮಿಳು ಚಿತ್ರ ಹಾಗೂ ವೆಬ್ ಸೀರೀಸ್ ಶೂಟಿಂಗ್ ಹಂತದಲ್ಲಿದೆ. ನಟ ಮನೋಜ್ ರವರು ಉಡುಪಿ ಜಿಲ್ಲೆಯ ವಿಜಯಾ ಬ್ಯಾಂಕಿನ ಬ್ರಾಂಡ್ ಅಂಬಾಸಡರ್ ಆಗಿಯೂ ಆಯ್ಕೆಯಾಗಿದ್ದರು. ಉತ್ತಮ ಡ್ಯಾನ್ಸರ್ ಆಗಿರುವ ಮನೋಜ್ ರವರು ಮೈಸೂರು ರಂಗಾಯಣದಲ್ಲಿ ಡಿಪ್ಲೋಮಾ ಇನ್ ಥಿಯೇಟರ್ ಎಜ್ಯುಕೇಶನ್(ಥಿಯೇಟರ್ ಆರ್ಟಿಸ್ಟ್) ಪದವಿಯನ್ನು ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ಜಿಮ್ ತರಬೇತುದಾರರಾದ ನವನೀತ್ ಬಜಾಜ್, ನವೀನ್ ಕುಲಾಲ್, ಆದರ್ಶ್ ಬಿರ್ವರವರು ಉಪಸ್ಥಿತರಿದ್ದರು.