ಪುತ್ತೂರು: ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್ನಲ್ಲಿ 13 ಮಕ್ಕಳಿಗೆ ಪ್ರಥಮ ಪವಿತ್ರ ಪರಮಪ್ರಸಾದ ನೀಡುವಿಕೆ ಕಾರ್ಯಕ್ರಮ ಚರ್ಚ್ನಲ್ಲಿ ಇತ್ತೀಚೆಗೆ ಜರಗಿತು.
ಮಾಯಿದೆ ದೇವುಸ್ ಚರ್ಚ್ನಲ್ಲಿ ನಡೆದ ದಿವ್ಯ ಬಲಿಪೂಜೆಯಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರು 13 ಮಕ್ಕಳಿಗೆ ಪ್ರಥಮ ಪವಿತ್ರ ಪರಮಪ್ರಸಾದವನ್ನು ನೀಡಿದರು. ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಧರ್ಮಗುರುಗಳಾದ ವಂ|ವಿಜಯ್ ಲೋಬೋ, ವಂ|ಅಶೋಕ್ ರಾಯನ್ ಕ್ರಾಸ್ತಾರವರು ಸಹ ಬಲಿಪೂಜೆಯಲ್ಲಿ ಭಕ್ತಾಧಿಗಳೊಂದಿಗೆ ಪಾಲ್ಗೊಂಡರು.
ಬಪ್ಪಳಿಗೆ ಜೀವನ್ ಕಿಶೋರ್ ಫೆರ್ನಾಂಡೀಸ್ ಹಾಗೂ ಪ್ರೀತಿ ಡಿಲೀಮರವರ ಪುತ್ರ ಆರನ್ ಲ್ಯಾರಿ ಫೆರ್ನಾಂಡೀಸ್ ಹಾಗೂ ಪುತ್ರಿ ರಿಯೋಲ ಫೆರ್ನಾಂಡೀಸ್, ದರ್ಬೆ ವಲೇರಿಯನ್ ಪಸನ್ನ ಹಾಗೂ ಲವೀನಾ ಮರಿಯ ಪಸನ್ನರವರ ಪುತ್ರ ನೀಲ್ ಡಿಯೋನ್ ಪಸನ್ನ, ಕಲ್ಲಾರೆ ಅನಿಲ್ ಪಾಸ್ ಹಾಗೂ ಸರಿತ ಪ್ರೀತಿ ಲೋಬೊರವರ ಪುತ್ರ ಆಸ್ಟನ್ ಪ್ರಿನ್ಸ್ ಪಾಸ್, ಮೊಟ್ಟೆತ್ತಡ್ಕ ಸಂದೀಪ್ ಲೋಬೋ ಹಾಗೂ ಜ್ಯೋತಿ ಶೈಲಾ ಲೋಬೋರವರ ಪುತ್ರ ಶಾನ್ ಜೋರ್ಡಾನ್ ಲೋಬೋ, ಮೊಟ್ಟೆತ್ತಡ್ಕ ಜೋನ್ ಡಿ’ಸೋಜ ಹಾಗೂ ಬೆನ್ಜಿ ಡಿ’ಸೋಜರವರ ಪುತ್ರ ಡ್ಯಾನಿ ಡಿ’ಸೋಜ, ಶಿಂಗಾಣಿ ಮೆಲ್ವಿನ್ ಗೊನ್ಸಾಲ್ವಿಸ್ ಹಾಗೂ ಪ್ರಿಯನ್ ಲೋಬೋರವರ ಪುತ್ರ ಮ್ಯಾಕ್ಲೀನ್ ಫ್ರಾನ್ಸಿಸ್ ಗೊನ್ಸಾಲ್ವಿಸ್, ಮಿತ್ತೂರು ರವಿ ವಾಲ್ಟರ್ ಡಿ’ಸೋಜ ಹಾಗೂ ಆನ್ಸಿಲ್ಲ ಫ್ಲಾವಿಯಾ ಡಿ’ಸೋಜರವರ ಪುತ್ರ ರಿಶನ್ ಡಿ’ಸೋಜ, ಬಲ್ನಾಡು ಲಾರೆನ್ಸ್ ರೊನಾಲ್ಡ್ ಸಿಕ್ವೇರಾ ಹಾಗೂ ರೀಟಾ ಡಿ’ಸೋಜರವರ ಪುತ್ರರಾದ ರೋವಿನ್ ಹಾಗೂ ರಾಬಿನ್, ಕಲ್ಲಾರೆ ಪಾವ್ಲ್ ಮೊಂತೇರೋ ಹಾಗೂ ಸೆವ್ರಿನ್ ಕ್ರಾಸ್ತಾರವರ ಪುತ್ರ ಪ್ರಿಸ್ಟನ್ ಮೊಂತೇರೋ, ಕಲ್ಲಾರೆ ಸುಜಿತ್ ಪಾಸ್ ಹಾಗೂ ಸಂಧ್ಯಾ ಪಾಸ್ರವರ ಪುತ್ರಿ ಶೈನಾ ಆಂಟೊಲಿನ್ ಪಾಸ್, ಸಾಮೆತ್ತಡ್ಕ ಜೋಕಿಂ ಡಿ’ಸೋಜ ಹಾಗೂ ಎಮಿಲಿ ರೆನ್ನಿ ಡಿ’ಸೋಜರವರ ಪುತ್ರಿ ಜೆಸ್ಲೀನ್ ಡಿ’ಸೋಜರವರು ಪ್ರಥಮ ಪವಿತ್ರ ಪರಮಪ್ರಸಾದವನ್ನು ಶ್ರದ್ಧಾ ಭಕ್ತಿಯಿಂದ ಸ್ವೀಕರಿಸಿದರು.