ಇಂದು(ಜೂ. 9):ಸವಣೂರು ಸೀತಾರಾಮ ರೈಯವರ 75ನೇ ಹುಟ್ಟು ಹಬ್ಬ

0

  • ಸವಣೂರು ವಿದ್ಯಾಗಂಗೋತ್ರಿಗೆ ಸುಬ್ರಹ್ಮಣ್ಯ ಶ್ರೀ, ಒಡಿಯೂರು ಶ್ರೀ, ಮಾಜಿ ಮುಖ್ಯಮಂತ್ರಿ ಡಿ.ವಿ.ಎಸ್, ಸಚಿವ ಎಸ್. ಅಂಗಾರ, ಸಂಸದ ಕಟೀಲ್, ಮಠಂದೂರು, ಎ.ಜೆ.ಶೆಟ್ಟಿ, ಡಾ| ಎಂ.ಎನ್.ಆರ್, ಡಾ.ಮೋಹನ್ ಆಳ್ವ ಸಹಿತ ಅನೇಕ ಗಣ್ಯರ ಆಗಮನ

 

ಪುತ್ತೂರು: ಸಹಕಾರಿ ರತ್ನ ಸವಣೂರು ಕೆ.ಸೀತಾರಾಮ ರೈಯವರ 75 ನೇ ಹುಟ್ಟು ಹಬ್ಬ ಸಮಾರಂಭ ಜೂ. 9 ರಂದು ಸವಣೂರು ವಿದ್ಯಾಗಂಗೋತ್ರಿಯಲ್ಲಿ ಅಪರಾಹ್ನ 2 ರಿಂದ ನಡೆಯಲಿದೆ. ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಚಿವ ಎಸ್. ಅಂಗಾರ, ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಳ್, ಶಾಸಕ ಸಂಜೀವ ಮಠಂದೂರು, ಉದ್ಯಮಿ ಡಾ| ಎ.ಜೆ.ಶೆಟ್ಟಿ ಮಂಗಳೂರು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್, ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಡಾ| ಮೋಹನ್ ಆಳ್ವ , ಸುಳ್ಯ ಎಂ.ಬಿ.ಫೌಂಡೇಶನ್‌ನ ಸಂಸ್ಥಾಪಕ ಎಂ.ಬಿ.ಸದಾಶಿವ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸೀತಾರಾಮ ರೈ ಅಮೃತ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here