ತಿಂಗಳಾಡಿ ಶಂಸುಲ್ ಉಲಮಾ ಸೆಂಟರ್‌ನಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ

0

ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ೯೬ನೇ ಸ್ಥಾಪನಾ ದಿನವನ್ನು ತಿಂಗಳಾಡಿ ಶಂಸುಲ್ ಉಲಮಾ ಸೆಂಟರ್ ವಠಾರದಲ್ಲಿ ಆಚರಿಸಲಾಯಿತು. ಮದ್ರಸದ ಗೌರವಾದ್ಯಕ್ಷ ಮಹಮ್ಮದ್ ಹಾಜಿ ಸಂತೋಷ್ ಧ್ವಜಾರೋಹಣ ನೆರವೇರಿಸಿದರು.


ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಪ್ರ.ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ ಹಾಗೂ ಮದ್ರಸ ಅಧ್ಯಾಪಕ ಇಸ್ಮಾಯಿಲ್ ಮುಸ್ಲಿಯಾರ್ ಸಂದೇಶ ಭಾಷಣ ಮಾಡಿದರು. ಶಂಸುಲ್ ಉಲಮಾ ಸೆಂಟರ್ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಉಪಾದ್ಯಕ್ಷ ಮಹಮ್ಮದ್ ಕುಂಞಿ ಪಟ್ಟೆ, ಪ್ರ.ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ಕೋಶಾಧಿಕಾರಿ ಪುತ್ತು ಪಟ್ಟೆ, ಕಾರ್ಯದರ್ಶಿ ಅಬ್ದುಲ್ ಹಮೀದ್ ದರ್ಬೆ, ನಿರ್ದೇಶಕರಾದ ಶಕೀಲ್ ಅಹ್ಮದ್ ಬೇರಿಕೆ, ರಶೀದ್ ತ್ಯಾಗರಾಜೆ, ಹಾರಿಸ್ ಬೋಳೋಡಿ, ಸಯೀದ್ ತೋಟ, ಲತೀಫ್ ಅಂಙತ್ತಡ್ಕ, ಎಸ್ಕೆಎಸ್ಸೆಸ್ಸೆಫ್‌ನ ರವೂಫ್ ತಿಂಗಳಾಡಿ, ನಜೀಬ್, ಅಶ್ರಫ್ ತ್ಯಾಗರಾಜೆ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here