ಪುತ್ತೂರು: `ಗಣರಾಜ್ಯ ರಕ್ಷಿಸಿ’ ಅಭಿಯಾನದ ಅಂಗವಾಗಿ ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಕಲ್ಲರ್ಪೆ ಮೈದಾನದಲ್ಲಿ ಕ್ರೀಡಾಕೂಟ ನಡೆಯಿತು. ಸಂಟ್ಯಾರ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಸಂಟ್ಯಾರ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಕೂಟ ಉಧ್ಘಾಟಿಸಿದ ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ಮಾತನಾಡಿ ದೇಶದ ಗಣರಾಜ್ಯವು ಅಪಾಯದಲ್ಲಿದ್ದು ಅದನ್ನು ಸಂರಕ್ಷಿಸಬೇಕಾದ ಮಹತ್ತರ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಕಬಡ್ಡಿ, ಹಗ್ಗಜಗ್ಗಾಟ, ಲಿಂಬೆ ಚಮಚ ಓಟ, ರಿಲೇ, ಗೋಣಿ ಚೀಲ ಓಟ ಮುಂತಾದ ಆಟಗಳು ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಅನ್ವರ್ ಸಂಟ್ಯಾರ್ ವಹಿಸಿದ್ದರು. ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್ ಪೇರಮೊಗರು ಸಂದರ್ಭೋಚಿತವಾಗಿ ಮಾತನಾಡಿದರು. ಪಂದ್ಯಾಟಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಪಾಪ್ಯುಲರ್ ಫ್ರಂಟ್ ಸಂಪ್ಯ ಏರಿಯಾ ಅಧ್ಯಕ್ಷ ಅಶ್ರಫ್ ಎಚ್.ಇ, ಸಂಟ್ಯಾರ್ ಮಸೀದಿಯ ಕೋಶಾಧಿಕಾರಿ ಹಮೀದ್ ಕಲ್ಲರ್ಪೆ, ಸಂಪ್ಯ ಜಮಾತ್ ಕಮಿಟಿ ಸದಸ್ಯ ನಿಝಾರ್ ಸಂಪ್ಯ, ಎಸ್ಕೆಎಸ್ಎಸ್ಎಫ್ ಸಂಟ್ಯಾರ್ ಘಟಕದ ಅಧ್ಯಕ್ಷ ಜಲೀಲ್ ಮರಿಕೆ, ಉಪಾಧ್ಯಕ್ಷ ಅಶ್ರಫ್ ಕಲ್ಲರ್ಪೆ, ಸಂಟ್ಯಾರ್ ಅನ್ಸಾರಿಯಾ ಯಂಗ್ಮೆನ್ಸ್ ಅಧ್ಯಕ್ಷ ರಿಯಾಝ್ ಬಳಕ್ಕ, ಕಾರ್ಯದರ್ಶಿ ಶಾಫಿ ಮರಿಕೆ, ಕೋಶಾಧಿಕಾರಿ ಶಾಫಿ ಸಂಟ್ಯಾರ್, ಉದ್ಯಮಿಗಳಾದ ಶರೀಫ್ ಕಲ್ಲರ್ಪೆ, ಸಮೀರ್ ಸಂಟ್ಯಾರ್, ಮಹಮ್ಮದ್ ಶಾ ಉಪಸ್ಥಿತರಿದ್ದರು.