ಪುತ್ತೂರು: ಸಮಸ್ತ ಸ್ಥಾಪನಾ ದಿನದ ಪ್ರಯುಕ್ತ ಪಾಪೆತ್ತಡ್ಕ ಮದ್ರಸ ವಠಾರದಲ್ಲಿ ದ್ವಜರೋಹಣ ನಡೆಯಿತು. ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಂಬಾಳಿ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ಯೂಸುಫ್ ಫೈಝಿ ದುವಾ ನೆರವೇರಿಸಿದರು. ಮಸೀದಿಯ ಪ್ರ.ಕಾರ್ಯದರ್ಶಿ ಶಾಫಿ ಪಾಪೆತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಲ್ಲಿಂ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಜಮಾಅತ್ ಉಪಾಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿ ಅಶ್ರಫ್ ಆನಾಜೆ, ಜಮಾಅತ್ ಪ್ರಮುಖರಾದ ಸುಲೈಮಾನ್ ಪರಮಾರ್ಗ, ಇಬ್ರಾಹಿಂ ಬೊಳ್ಳಮೆ, ಶಮ್ಮೂನ್, ಇಬ್ರಾಹಿಂ ಹಿಂದಾರ್, ಇಸ್ಮಾಯಿಲ್ ಪಿ, ಉಸ್ಮಾನ್ ಪಾಪೆತ್ತಡ್ಕ, ಸುಲೈಮಾನ್ ಪಿ, ಇಸ್ಮಾಯಿಲ್ ಬೊಳ್ಳಮೆ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಹಮೀದ್ ಪಾಪೆತ್ತಡ್ಕ, ಉಪಾಧ್ಯಕ್ಷ ಯಾಕೂಬ್ ಪಾಪೆತ್ತಡ್ಕ, ಕಾರ್ಯದರ್ಶಿ ಶಮೀರ್ ಪಾಪೆತ್ತಡ್ಕ, ಹಳೆ ವಿದ್ಯಾರ್ಥಿ ಸಂಘದ ಇಲ್ಯಾಸ್ ಪರಮಾರ್ಗ, ಹಾರಿಸ್ ಚೆಡವು, ರಶೀದ್ ಪಾಪೆತ್ತಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.