ಪುತ್ತೂರು: ಪುತ್ತೂರು ಮಹೇಶ್ವರ ಬಾಟ್ಲಿಂಗ್ ಕಂಪೆನಿಯ ವಾಹನ ಚಾಲಕ ಪದ್ಮನಾಭ ರೈ(59ವ)ರವರು ಇತ್ತೀಚೆಗೆ ನಿಧನರಾದರು.
ಒಳತ್ತಡ್ಕ ಮೂಲದವರಾದ ಪದ್ಮನಾಭ ರೈ ಅವರು ಕಾಯರ್ಮಜಲಿನಲ್ಲಿ ವಾಸ್ತವ್ಯ ಹೊಂದಿದ್ದು, ಮಹೇಶ್ವರ ಬಾಟ್ಲಿಂಗ್ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ವಾಹನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾದರು. ಮೃತರು ಪತ್ನಿ, ಪುತ್ರ ಚಿಂತನ್, ಪುತ್ರಿ ಕವನ ಅವರನ್ನು ಅಗಲಿದ್ದಾರೆ.