ಉಪ್ಪಿನಂಗಡಿ: ಇತ್ತೀಚೆಗೆ ನಿಧನ ಹೊಂದಿದ ಬಾರ್ಯ ನಿವಾಸಿ ವಿವೇಕಾನಂದ ಶೆಟ್ಟಿಯವರ ಉತ್ತರ ಕ್ರಿಯೆಯ ವೈದಿಕ ಕಾರ್ಯಕ್ರಮ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಳದ ಪುಣ್ಯ ಕ್ಷೇತ್ರದಲ್ಲಿ ನಡೆದು, ಬಳಿಕ ನೇತ್ರಾವತಿ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ವಿಠಲ ಶೆಟ್ಟಿಯವರು ನುಡಿನಮನ ಸಲ್ಲಿಸುತ್ತಾ ವಿವೇಕಾನಂದ ಶೆಟ್ಟಿಯವರ ಸರಳತೆ, ಸಾತ್ವಿಕ ಜೀವನ ಕ್ರಮವನ್ನು ಅಭಿನಂದಿಸುತ್ತಾ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ಗುಣಗಳು ಸರ್ವರಿಗೂ ಮಾದರಿ ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಡಿ. ಬಾಲಕೃಷ್ಣ ಮಾತನಾಡಿ ಸಾವಿರಕ್ಕೂ ಹೆಚ್ಚಿನ ಜನರಿಗೆ ಜೀವವಿಮಾದ ಸುರಕ್ಷತೆಯನ್ನು ನೀಡಿ ಯಶಸ್ಸಿ ಪ್ರತಿನಿಧಿಯಾಗಿ ಗೌರವಿಸಲ್ಪಟ್ಟಿದ್ದರು. ತಮ್ಮ ಉತ್ತಮ ಗುಣಗಳಿಂದ ಅಪಾರ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ರವೀಂದ್ರ ದರ್ಬೆ ನಿರ್ವಹಿಸಿದರು. ಪತ್ನಿ ಪುಷ್ಪಲತಾ ವಿ. ಶೆಟ್ಟಿ ಮತ್ತು ಪುತ್ರರಾದ ಪ್ರಪುಲ್, ವಿಪುಲ್ ವೇದಿಕೆಯಲ್ಲಿದ್ದರು.