ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿ ಶತಾಮೃತದಲ್ಲಿ ನಡೆದ ಉದ್ಯೋಗ ನೈಪುಣ್ಯ ಶಿಬಿರದಲ್ಲಿ ಫ್ಯಾಷನ್ ಡಿಸೈನ್ ವಿಭಾಗಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಇಡ್ಡಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು ಹೊಲಿಗೆ ಯಂತ್ರಗಳನ್ನು ಹಸ್ತಾಂತರಿಸಿ ಮಾತನಾಡಿ ಮಹಿಳಾ ಸ್ವಾವಲಂಬನೆಗಾಗಿ ಸಂಘದ ಯೋಜನೆಯನ್ವಯ ಈ ಕಾರ್ಯಗಳನ್ನು ಮಾಡಲಾಗಿದೆ. ಫ್ಯಾಷನ್ ಡಿಸೈನ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ಇದರ ಸದುಪಯೋಗ ಪಡೆದು ಜೀವನದಲ್ಲಿ ಯಶಸ್ವಿಯಾಗಿ ಎಂದು ಹಾರೈಸಿ ಶುಭ ಕೋರಿದರು. ನೈಪುಣ್ಯ ತರಬೇತಿ ಪಡೆದ ಎಲ್ಲಾ ಅಭ್ಯರ್ಥಿಗಳು ಬಯಸಿದಲ್ಲಿ ಅವರ ಉದ್ಯೋಗಕ್ಕೆ ಬೇಕಾದ ಯಂತ್ರಗಳನ್ನು, ಸಲಕರಣೆಗಳನ್ನು ಪಡೆಯಲು ಕನಿಷ್ಠ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುವುದು ಎಂದರು. ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಮ ಭಟ್ ನೀರಪಳಿಕೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರನಾಯ್ಕ ಎಸ್, ನಿರ್ದೇಶಕರಾದ ಜಯಂತ್ ಡಿ, ಶೇಖರ ನಾಯ್ಕ, ಜನಾರ್ಧನ ಕಾರ್ಯಡಿ, ನವೋದಯ ಸ್ವ ಸಹಾಯ ಗುಂಪಿನ ಪೇರಕಿ ಯಶೋದ, ಶಾಖಾಧಿಕಾರಿ ರವೀಂದ್ರ ಮೇಲಾಂಟ ಉಪಸ್ಥಿತರಿದ್ದರು. ಈಶ್ವರ ಕುಲಾಲ್ ಸ್ವಾಗತಿಸಿ, ರಮ್ಯಾ ವಂದಿಸಿದರು.