ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಡಮಂಗಲ ಘಟಕ, ಕಡಬ ಪ್ರಖಂಡ ವತಿಯಿಂದ ಬಡ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿ ಹಸ್ತಾಂತರ

0

ಕಡಬ:ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಡಮಂಗಲ ಘಟಕ ಹಾಗೂ ಕಡಬ ಪ್ರಖಂಡ ಇದರ ಸಂಕಲ್ಪದಂತೆ ಬಡ ಕುಟುಂಬವನ್ನು ಗುರುತಿಸಿ ಮೂಲಭೂತವಾದ ವಾಸ್ತವ್ಯದ ಮನೆಯನ್ನು ಪುನಶ್ಚೇತನಗೊಳಿಸಿ ಅವರ ಬದುಕಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ನಿರ್ಧರಿಸಿ ಬಜರಂಗದಳದ ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೇಯವಾಕ್ಯದಡಿಯಲ್ಲಿ ಕಡಬ ತಾಲೂಕಿನ ದೇವಸ್ಯದ ಬೋಲ್ಮಣ್ ಐತ್ತರವರಿಗೆ ಮನೆಯನ್ನು ನಿರ್ಮಾಣ ಮಾಡಿ ಗೃಹಪ್ರವೇಶ ಹಾಗೂ ಗೃಹ ಹಸ್ತಾಂತರಿಸುವ ಕಾರ್ಯಕ್ರಮ ಜು.13ರಂದು ನಡೆಯಿತು.

ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಅಧ್ಯಕ್ಷ ರಾಧಕೃಷ್ಣ ಕೊಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಸೇವಾ ಪ್ರಮುಖ್ ವಿನಯ್ ಕೋಲ್ಪೆ, ಎಡಮಂಗಲ ವಿಶ್ವ ಹಿಂದೂ ಪರಿಷತ್ ಇದರ ಗೌರವಾಧ್ಯಕ್ಷ ಗಿರೀಶ್ ನಡುಬೈಲು, ಅಧ್ಯಕ್ಷ ಈಶ್ವರಗೌಡ ಜಾಲ್ತರು, ಬಜರಂಗದಳದ ಸಂಯೋಜಕರಾದ ಪ್ರವೀಣ್ ರೈ ಮರ್ದುಲಾ, ಕಾರ್ಯದರ್ಶಿ ಸಂಪತ್, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಮಾ ನೂಚಿಲ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಶುಭೋದ ಎಸ್ ರೈ, ಗೋರಕ್ಷಾ ಪ್ರಮುಖ್ ಚೇತನ್ ದೊಳ್ತಿಲ,ವಿದ್ಯಾರ್ಥಿ ಪ್ರಮುಖ್ ಆಕಾಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿ.ಹಿಂ.ಪ ಗೌರವ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here