ನೂಜಿಬಾಳ್ತಿಲ, ಪುತ್ತಿಗೆಯಲ್ಲಿ ಕಾಡಾನೆಯಿಂದ ಕೃಷಿಗೆ ಹಾನಿ

0

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಹಾಗೂ ಕಡ್ಯ ಕೊಣಾಜೆ ಗ್ರಾಮದ ಪುತ್ತಿಗೆಯಲ್ಲಿ ಕಾಡಾನೆ ಕೃಷಿ ತೋಟಕ್ಕೆ ನುಗ್ಗಿ ಹಾನಿಗೈದಿರುವ ಘಟನೆ ನಡೆದಿದೆ. ನೂಜಿಬಾಳ್ತಿಲ ಗ್ರಾಮದ ನಿಡ್ಡೋ ಪದ್ಮನಾಭ, ಸಂತೋಷ್, ಚಂದ್ರಪ್ರಸಾದ್ ಅವರ ತೋಟದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಅಡಿಕೆ, ಬಾಳೆ ಕೃಷಿಗೆ ಹಾನಿ ಮಾಡಿದೆ. ಕೊಣಾಜೆ ಗ್ರಾಮದ ಪುತ್ತಿಗೆ ಓಡಿಯ್ಯ ಸುನಿಲ್ ಜೋಸೆ- ಅವರ ತೋಟದಲ್ಲೂ ಅಡಿಕೆ, ಬಾಳೆ ಕೃಷಿಗೆ ಕಾಡಾನೆ ಹಾನಿ ಮಾಡಿದೆ. ಪುತ್ತಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here