ಉಪ್ಪಿನಂಗಡಿ: ಗೃಹ ರಕ್ಷಕರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದವರು ಇಲ್ಲಿನ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಮರಗಳ ಅಪಾಯಕಾರಿ ಗೆಲ್ಲು ತೆರವು ಕಾರ್ಯ ನಡೆಸಿದರು.
ಮರ ತೆರವು ಕಾರ್ಯದಲ್ಲಿ ಗೃಹರಕ್ಷಕದಳದ ಪ್ರಭಾರ ಘಟಕಾಽಕಾರಿ ದಿನೇಶ್, ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಅಣ್ಣು ಬಿ., ಗೃಹರಕ್ಷಕರಾದ ವಸಂತ, ಸೋಮನಾಥ, ಸಮದ್,ಪ್ರಶಾಂತ್, ಈಜುಗಾರರಾದ ಮಹಮ್ಮದ್ ಬಂದಾರು, ವಿಶ್ವನಾಥ್, ಸುದರ್ಶನ್ ತೊಡಗಿಸಿಕೊಂಡರು. ಈ ಸಂದರ್ಭ ಉಪ್ಪಿನಂಗಡಿ ಗ್ರಾಮ ಸಹಾಯಕ ಯತೀಶ್, ಶಾಲಾ ಮುಖ್ಯ ಶಿಕ್ಷಕ ಹನುಮಂತಯ್ಯ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ರವಿಶಾಂತಿ, ಸದಸ್ಯ ಅಬ್ದುಲ್ ಮಜೀದ್ ಇದ್ದರು.