ಪುತ್ತೂರು : ಪುತ್ತೂರು ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ 25ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ 22ನೇ ಸ್ವಚ್ಛತಾ ಕಾರ್ಯಕ್ರಮ ಬನ್ನೂರು ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆಯಿತು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ವಚ್ಛತೆ ನಡೆಯಿತು. ಶನೀಶ್ವರ ಕಟ್ಟೆಯ ಅಧ್ಯಕ್ಷ ದಿನೇಶ್ ಸಾಲ್ಯಾನ್, ರಿಲಯನ್ಸ್ ಟ್ರೆಂಡ್ ಮತ್ತು ಶಾಲೆಯ ಮುಖ್ಯಗುರು ರಾಮಚಂದ್ರ, ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಸಿಲ್ವೆಸ್ಟರ್ ಡಿ.ಸೋಜ ಮೊಟ್ಟೆತಡ್ಕ, ಸಂಘದ ಅಧ್ಯಕ್ಷ ಅರವಿಂದ ಪೇರಿಗೆರಿ, ಕಾರ್ಯದರ್ಶಿ ತಾರನಾಥ ಗೌಡ ಬನ್ನೂರು, ಸದಸ್ಯರಾದ ಲಕ್ಷ್ಮಣ, ರೋಹಿದಾಸ್ ಗಾಣಿಗ, ಶಶಿಧರ ಸಿಟಿ ಗುಡ್ಡೆ, ಶಶಿ ಪೂಜಾರಿ ಕೊಡಿಪ್ಪಾಡಿ, ಯಾದವ, ನವೀನ್ ಆಚರ್ಯ, ಸುನಿಲ್ ತ್ಯಾಗರಜೆ, ವಿಶ್ವನಾಥ ಪೇರಿಗೇರಿ ಸಹಕರಿಸಿದರು.