ಹರ್ ಘರ್ ತಿರಂಗ ಪ್ರಯುಕ್ತ ಫಿಲೋಮಿನಾದಲ್ಲಿ ಕಾಲ್ನಡಿಗೆ ಜಾಥಾ

0

ಪುತ್ತೂರು: ಸ್ವಾತಂತ್ರೊತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನವಾಗಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಹಭಾಗಿತ್ವದಲ್ಲಿ ಆ.13 ರಂದು ಕಾಲ್ನಡಿಗೆ ಜಾಥಾವು ಜರಗಿತು.

ಜಾಥಾವನ್ನು ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ|ಉದಯ ಕೆ.ರವರು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಸುಮಾರು ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಜಾಥಾವು ಫಿಲೋಮಿನಾ ಕಾಲೇಜು ಆವರಣದಿಂದ ಹೊರಟು ದರ್ಬೆ ವೃತ್ತ, ಕಲ್ಲಾರೆ-ಏಳ್ಮುಡಿ, ಬಸ್ ಸ್ಟ್ಯಾಂಡ್ ಮುಖೇನ ಸಾಗಿ ಕೋರ್ಟ್ ರಸ್ತೆ, ಮಿನಿವಿಧಾನ ಸೌಧದ ಬಳಿಯಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಸಮಾಪನಗೊಂಡಿತು.

ಕಾಲೇಜಿನ ಪ್ರಾಂಶುಪಾಲ ಡಾ| ಆಂಟನಿ ಪ್ರಕಾಶ್ ಮೊಂತೇರೊರವರ ಮಾರ್ಗದರ್ಶನದಲ್ಲಿ ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿ ಪ್ರೊ|ವಾಸುದೇವ ಹಾಗೂ ಪ್ರೊ|ಪುಷ್ಪಾ, ಎನ್.ಸಿ.ಸಿ ಘಟಕದ ಅಧಿಕಾರಿ ಲೆ|ಜೋನ್ಸನ್ ಡೇವಿಡ್ ಸಿಕ್ವೇರಾ, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಡಾ|ಚಂದ್ರಶೇಖರ್ ಹಾಗೂ ಪ್ರೊ|ಭಾರತಿ ಎಸ್ ರೈ, ರೋವರ್ಸ್ ರೇಂಜರ್ಸ್ ಘಟಕದ ಅಧಿಕಾರಿ ಪ್ರೊ|ಧನ್ಯ ಪಿ.ಟಿರವರ ಜಾಥಾವನ್ನು ಯಶಸ್ವಿಯಾಗಿ ಸಂಘಟಿಸಿದರು.

LEAVE A REPLY

Please enter your comment!
Please enter your name here