ಕಬಕ ಸ.ಪ.ಪೂ.ಕಾಲೇಜಿನಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ

0

ಕಬಕ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಪ್ರೇಮಲತಾ ಜೆ ರೈ ಇವರು ಧ್ವಜಾರೋಹಣ ಮಾಡಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ, ನಿವೃತ್ತ ಯೋಧರಾದ ಬಾಬು ಪೂಜಾರಿ ಮತ್ತು ಬೆಣ್ಣೆಮನೆ ಸತ್ಯನಾರಾಯಣ ಭಟ್ ಇವರನ್ನು ಸನ್ಮಾನಿಸಲಾಯಿತು. ಅಝಾದಿ ಕಾ ಅಮೃತ ಮಹೋತ್ಸವದ ಸಲುವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು.
ಸಭಾ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಟಿ.ಯಸ್.ಭಟ್ ವಹಿಸಿದ್ದರು. ಪ್ರಾಂಶುಪಾಲ ಶ್ರೀಮತಿ ಪ್ರೇಮಲತಾ ಜೆ ರೈ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ಚಂದ್ರಹಾಸ ರೈ ಬಿ ಇವರು ಧನ್ಯವಾದ ಅರ್ಪಿಸಿದರು.ಉಪನ್ಯಾಸಕಿ ಶ್ರೀಮತಿ ವಿಜೇತಾ ಕಾರ್ಯಕ್ರಮ ನಿರ್ವಹಿಸಿದರು. ಗ್ರಾ.ಪಂ. ಸದಸ್ಯ ಶಾಬಾ ಕಬಕ, ಇಸ್ಮಾಯಿಲ್, ಕಾರ್ತಿಕ್ ರೈ, ದಿನೇಶ್ ಸಾಲಿಯಾನ್, ಚಂದ್ರಶೇಖರ, ನಿವೃತ್ತ ಉಪನ್ಯಾಸಕ ವೆಂಕಟ್ರಮಣ ಭಟ್, ಉಪನ್ಯಾಸಕರಾದ ಶ್ರೀಧರ ರೈ, ಶ್ರೀಮತಿ ವನಿತಾ, ನಯನ ಕುಮಾರಿ, ಶ್ರೀಮತಿ ಅಶ್ವಿತಾ, ಕವನ, ಜಯಲಕ್ಷ್ಮಿ, ಚಂದ್ರಿಕಾ, ಶ್ರೀಮತಿ ಲತಾಶ್ರೀ,ಯತೀಶ, ಶ್ರೀಮತಿ ಜಯಲಕ್ಷ್ಮಿ, ಬೋಧಕೇತರ ಸಿಬ್ಬಂದಿ ಮಮತಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

LEAVE A REPLY

Please enter your comment!
Please enter your name here